‘ರಾಜಕೀಯ ವೈಷಮ್ಯದಿಂದಾಗಿ ಸ್ಥಳೀಯ ಮುಖಂಡರಾದ ಸಂಪತ್ ರಾಜ್, ಜಾಕೀರ್ ಹಾಗೂ ಇತರರು ಮನೆ ಮೇಲೆ ದಾಳಿ ಮಾಡಲು ಕುಮ್ಮಕ್ಕು ನೀಡಿದ್ದರು. ಯುವಕರನ್ನು ಪ್ರಚೋದಿಸಿದ್ದರೆಂದು ಅಖಂಡ ಶ್ರೀನಿವಾಸಮೂರ್ತಿ ಅವರು ದೂರಿನಲ್ಲಿ ತಿಳಿಸಿದ್ದರು. ಅದರನ್ವಯ ತನಿಖೆ ನಡೆಸಿ ಪುರಾವೆಗಳನ್ನು ಸಂಗ್ರಹಿಸಿ, ಸಾಕ್ಷಿಗಳ ಹೇಳಿಕೆ ಪಡೆದು 400 ಪುಟಗಳ ದೋಷಾರೋಪ ಪಟ್ಟಿ ಸಿದ್ಧಪಡಿಸಲಾಗಿತ್ತು’ ಎಂದೂ ತಿಳಿಸಿದರು.