‘ಗ್ರಾಮದ ಸರ್ವೆ ನಂ 16ರಲ್ಲಿ 16 ಎಕರೆ 2 ಕುಂಟೆ ಕೆರೆ ಜಾಗವಿದೆ. ಜಲಕಾಯದಲ್ಲಿ ಬೇಸಿಗೆ ಕಾಲದಲ್ಲೂ ತಳಮಟ್ಟದ ನೀರು ಇರುತ್ತದೆ. ಗ್ರಾಮದ ರೈತರು ಹಸುಕರುಗಳನ್ನು ದಡದಲ್ಲಿ ಮೇಯಿಸಿ ಮೈ ತೊಳೆಯುತ್ತಾರೆ. ಆದರೆ, ಕಳೆದ ಐದಾರು ತಿಂಗಳಿನಿಂದ ಕೆರೆ ಅಂಗಳಕ್ಕೆ ಕೆಲ ಕಿಡಿಗೇಡಿಗಳು ಮಧ್ಯರಾತ್ರಿಯಲ್ಲಿ ಲಾರಿಗಟ್ಟಲೇ ತ್ಯಾಜ್ಯ ತಂದು ಸುರಿಯುತ್ತಿದ್ದಾರೆ’ ಎಂದು ಗ್ರಾಮದ ನಿವಾಸಿ ವಿಜಯ್ ಕುಮಾರ್ ಬೇಸರ
ವ್ಯಕ್ತಪಡಿಸಿದರು.