‘ಹಿಂದಿನ ತಪ್ಪುಗಳಿಂದ ಪಾಠ ಕಲಿಯಬೇಕು. ಅನುದಾನದ ಕೊರತೆ ಎದುರಿಸುತ್ತಿರುವ ಸಂದರ್ಭದಲ್ಲಿ ಬಿಬಿಎಂಪಿಯು ಹಣವನ್ನು ಎಚ್ಚರಿಕೆಯಿಂದ ವೆಚ್ಚ ಮಾಡುವುದನ್ನು ಬಿಟ್ಟು ಈ ರೀತಿ ದುಂದು ವೆಚ್ಚ ಮಾಡುವುದನ್ನು ಸಮರ್ಥಿಸಲಾಗದು. ಸಂಚಾರ ದಟ್ಟಣೆ ನಿಯಂತ್ರಣಕ್ಕೆ ನೆರವಾಗುವುದಾದರೆ, ಸ್ಕೈ ವಾಕ್ಗಳು ನಿರ್ಮಿಸುವುದನ್ನು ಸ್ವಾಗತಿಸಬಹುದು.ಆದರೆ, ಜಾಹೀರಾತು ಪ್ರಕಟಣೆ ಹೊರತಾಗಿ ಬೇರಾವ ಪ್ರಯೋಜನವೂ ಇವುಗಳಿಂದ ಆಗುತ್ತಿಲ್ಲ’ ಎಂದು ಅವರು ಪ್ರತಿಪಾದಿಸಿದ್ದಾರೆ.