ಭಾರತೀಯ ಸಮಾಜವನ್ನು ಅಂಬೇಡ್ಕರ್ ಅತ್ಯಂತ ಸೂಕ್ಷ್ಮವಾಗಿ ಅಧ್ಯಯನ ಮಾಡಿದ್ದರು. ಹಾಗಾಗಿ, ಸರ್ವರಿಗೂ ಸಲ್ಲುವ, ಸರ್ವರನ್ನೂ ಒಳಗೊಳ್ಳುವ ಸಂವಿಧಾನ ರೂಪಿಸಲು ಸಾಧ್ಯವಾಯಿತು. ಸಂವಿಧಾನದ ಪೀಠಿಕೆ ಸಂವಿಧಾನದ ಸಾರವನ್ನು ಪ್ರತಿಬಿಂಬಿಸುವಂತಿದೆ. ಪ್ರತಿಯೊಬ್ಬರೂ ಈ ಪೀಠಿಕೆಯ ಧ್ಯೇಯೋದ್ದೇಶ ದೈನಂದಿನ ಜೀವನದಲ್ಲಿ ರೂಢಿಸಿಕೊಳ್ಳಬೇಕು ಎಂದರು.