ಬೆಂಗಳೂರು: ಸೂರ್ಯಾಯು ವೆಲ್ನೆಸ್ ಕಂಪನಿ ‘ಸೂರ್ಯ ಹೈಡ್ರೇಟ್ ವಾಟರ್’ ಎನ್ನುವ ವಿಶೇಷಕುಡಿಯುವ ನೀರಿನ ಬಾಟಲಿಯನ್ನು ಪರಿಚಯಿಸಿದೆ.
‘ಈ ನೀರಿನ ಸೇವನೆಯಿಂದಮಧುಮೇಹ ರೋಗಿಗಳಲ್ಲಿ ಸಕ್ಕರೆ ಪ್ರಮಾಣ ಕಡಿಮೆಯಾಗುತ್ತದೆ ಎನ್ನುವುದು ಪ್ರಾಯೋಗಿಕವಾಗಿ ಧೃಡಪಟ್ಟಿದೆ. ಅಲ್ಲದೆ ಇದು ಅಸ್ವಸ್ಥತೆಯನ್ನು ತಡೆಗಟ್ಟುತ್ತದೆ’ ಎಂದು ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಎಸ್.ಆರ್.ಪ್ರಸನ್ನ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
‘ನೀರಿನಪಿಎಚ್ ಮೌಲ್ಯ 8.2 ಇದೆ. 1 ಗ್ಲಾಸ್ ಸೂರ್ಯ ಹೈಡ್ರೇಟ್ ನೀರು ಸಾಮಾನ್ಯ ನೀರಿನ 13 ಗ್ಲಾಸ್ಗೆ ಸಮ. ಹಲವು ಔಷಧಿ ಗುಣಗಳನ್ನು ಹೊಂದಿದೆ’ ಎಂದರು.