‘ಕೆಲವರು ಜೀವ ಭಯವಿರುವುದಾಗಿ ಹೇಳಿ ಪರವಾನಗಿ ಶಸ್ತ್ರಾಸ್ತ್ರ ಪಡೆದಿದ್ದರು. ಇಂಥ ಹಲವರು, ಶಸ್ತ್ರಾಸ್ತ್ರ ವಿನಾಯಿತಿ ಕೋರಿ ಮನವಿ ಸಲ್ಲಿಸಿದ್ದರು. ಅವರಿಗೆ ವಿನಾಯಿತಿ ನೀಡಲಾಗಿದೆ. ಉಳಿದಂತೆ ಹಲವು ಪರವಾನಗಿದಾರರು, ತಮ್ಮ ಬಂದೂಕು, ಪಿಸ್ತೂಲ್, ರಿವಾಲ್ವರ್ ಹಾಗೂ ಇತರೆ ಶಸ್ತ್ರಾಸ್ತ್ರಗಳನ್ನು ಠೇವಣಿ ಇರಿಸಿದ್ದಾರೆ. ಚುನಾವಣೆ ಬಳಿಕ ಎಲ್ಲವನ್ನೂ ಪರವಾನಗಿದಾರರಿಗೆ ವಾಪಸು ನೀಡಲಾಗುವುದು’ ಎಂದು ಹೇಳಿದರು.