‘ಸಮಿತಿ ಸಭೆಯನ್ನು ನಡೆಸಿ, ನಮಗೆ ಜಾಗ ಗುರುತಿಸಿಕೊಡಿ ಎಂದು ಹಲವು ತಿಂಗಳಿಂದ ಮನವಿ ಮಾಡಿಕೊಂಡರೂ ಆ ಪ್ರಕ್ರಿಯೆ ನಡೆಸಿಲ್ಲ. ನಾವೆಲ್ಲ ಪರವಾನಗಿ ಪಡೆದ ವ್ಯಾಪಾರಿಗಳು. ಹಬ್ಬದ ಸಂದರ್ಭದಲ್ಲಿ ವ್ಯಾಪಾರ ಹೆಚ್ಚಾಗಿರುತ್ತದೆ. ಇಂತಹ ಸಂದರ್ಭದಲ್ಲೇ ನಮಗೆ ಅವಕಾಶ ನೀಡದಿದ್ದರೆ ಜೀವನ ಸಾಗಿಸುವುದು ಕಷ್ಟವಾಗುತ್ತದೆ. ಹೀಗಾಗಿ, ತೆರವು ಮಾಡಬೇಡಿ ಎಂದು ಮನವಿ ಮಾಡಿಕೊಳ್ಳುತ್ತಿದ್ದರೂ ಪೊಲೀಸ ರೊಂದಿಗೆ ಬಂದು ನಮ್ಮ ಸಾಮಗ್ರಿಗಳನ್ನು ತೆಗೆಯುತ್ತಿದ್ದಾರೆ’ ಎಂದು ನೂರಾರು ವ್ಯಾಪಾರಿಗಳು ದೂರಿದರು.