‘ದೂರುದಾರ ಚಂದನ್, ತುಮ
ಕೂರಿನ ಅಡಿಕೆ ವ್ಯಾಪಾರಿ ಮೋಹನ್ ಎಂಬುವವರ ಕಾರು ಚಾಲಕರಾಗಿ ಕೆಲಸ ಮಾಡುತ್ತಿದ್ದಾರೆ. ಚಂದನ್ ಹಾಗೂ ಕೆಲಸಗಾರ ಕುಮಾರಸ್ವಾಮಿ ಅವರಿಗೆ ಡಿ. 27ರಂದು ₹ 80 ಲಕ್ಷ ನೀಡಿದ್ದ ಮೋಹನ್, ಸೇಲಂನಲ್ಲಿರುವ ಪರಿಚಯಸ್ಥರಿಗೆ ನೀಡುವಂತೆ ಹೇಳಿದ್ದರು.’ ‘ಹಣದ ಬ್ಯಾಗ್ ಪಡೆದಿದ್ದ ಚಂದನ್ ಹಾಗೂ ಕುಮಾರಸ್ವಾಮಿ, ಮಹೇಂದ್ರ ಎಕ್ಸ್ಯುವಿ ಕಾರಿನಲ್ಲಿ (ಕೆಎ 06 ಜೆಡ್ 7270) ತುಮಕೂರಿನಿಂದ ಹೊರಟಿದ್ದರು. ನೆಲಮಂಗಲ, ಗೊರಗುಂಟೆಪಾಳ್ಯ, ನಾಯಂಡನಹಳ್ಳಿ, ಮೈಸೂರು ರಸ್ತೆ ಮೂಲಕ ಕೆ.ಎಚ್.ರಸ್ತೆಗೆ ಬಂದಿದ್ದರು. ಸಿಗ್ನಲ್ ಇದ್ದಿದ್ದರಿಂದ ಕಾರು ನಿಲ್ಲಿಸಿದ್ದರು’ ಎಂದು ಪೊಲೀಸರು ತಿಳಿಸಿದರು.