<p><strong>ಬೆಂಗಳೂರು</strong>: ಬೇರೆ ರಾಜ್ಯಗಳಲ್ಲಿ ನೋಂದಣಿ ಮಾಡಿಕೊಂಡು ರಾಜ್ಯದಲ್ಲಿ ಮೋಟಾರು ವಾಹನ ತೆರಿಗೆ ಪಾವತಿಸದೇ ಸಂಚರಿಸುತ್ತಿದ್ದ ರೋಲ್ಸ್ ರಾಯ್ಸ್ ಕುಲಿನನ್, ಮರ್ಸಿಡಿಸ್ ಬೆಂಜ್, ಪೋರ್ಷೆ, ಔಡಿ ಕಾರು ಸೇರಿದಂತೆ ದುಬಾರಿ ಬೆಲೆಯ ಐದು ಐಷಾರಾಮಿ ಕಾರುಗಳನ್ನು ಸಾರಿಗೆ ಇಲಾಖೆಯ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಈ ವೇಳೆ ನಕಲಿ ನೋಂದಣಿ ಹೊಂದಿದ್ದ ಒಂದು ಕಾರು ಕೂಡ ಪತ್ತೆಯಾಗಿದೆ.</p>.<p>ಸಾರಿಗೆ ಇಲಾಖೆ (ಪ್ರವರ್ತನ) ಹೆಚ್ಚುವರಿ ಆಯುಕ್ತ ಸಿ. ಮಲ್ಲಿಕಾರ್ಜುನ ನೇತೃತ್ವದಲ್ಲಿ ಬೆಂಗಳೂರು ಮತ್ತು ಮೈಸೂರಿನ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಾದ ರಂಜಿತ್ ಎನ್., ಇಮ್ತಿಯಾಜ್ ಪಾಷ, ಕುಮಾರಸ್ವಾಮಿ, ವಿಜಯಕುಮಾರ್, ರಾಮಚಂದ್ರ, ಅಲಿ ಉದ್ದೀನ್ ತಂಡ ಕಾರ್ಯಾಚರಣೆ ನಡೆಸಿತ್ತು.</p>.<p>₹ 2 ಕೋಟಿ ಮೌಲ್ಯದ ಮರ್ಸಿಡಿಸ್ ಬೆಂಜ್ ಕಾರು ನಕಲಿ ದಾಖಲೆಗಳನ್ನು ಹೊಂದಿತ್ತು. ಉಳಿದ ನಾಲ್ಕು ಕಾರುಗಳು ಪುದುಚೇರಿಯ ನೋಂದಣಿ ಹೊಂದಿರುವ ರಾಜ್ಯದ ಕಾರುಗಳಾಗಿದ್ದವು.</p>.<p>ವಶಪಡಿಸಿಕೊಂಡಿರುವ ಕಾರುಗಳ ಮಾಲೀಕರಿಂದ ₹ 3.02 ಕೋಟಿ ತೆರಿಗೆ ವಸೂಲಿ ಮಾಡಲಾಗಿದೆ ಎಂದು ಸಿ. ಮಲ್ಲಿಕಾರ್ಜುನ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ಬೇರೆ ರಾಜ್ಯಗಳಲ್ಲಿ ನೋಂದಣಿ ಮಾಡಿಕೊಂಡು ರಾಜ್ಯದಲ್ಲಿ ಮೋಟಾರು ವಾಹನ ತೆರಿಗೆ ಪಾವತಿಸದೇ ಸಂಚರಿಸುತ್ತಿದ್ದ ರೋಲ್ಸ್ ರಾಯ್ಸ್ ಕುಲಿನನ್, ಮರ್ಸಿಡಿಸ್ ಬೆಂಜ್, ಪೋರ್ಷೆ, ಔಡಿ ಕಾರು ಸೇರಿದಂತೆ ದುಬಾರಿ ಬೆಲೆಯ ಐದು ಐಷಾರಾಮಿ ಕಾರುಗಳನ್ನು ಸಾರಿಗೆ ಇಲಾಖೆಯ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಈ ವೇಳೆ ನಕಲಿ ನೋಂದಣಿ ಹೊಂದಿದ್ದ ಒಂದು ಕಾರು ಕೂಡ ಪತ್ತೆಯಾಗಿದೆ.</p>.<p>ಸಾರಿಗೆ ಇಲಾಖೆ (ಪ್ರವರ್ತನ) ಹೆಚ್ಚುವರಿ ಆಯುಕ್ತ ಸಿ. ಮಲ್ಲಿಕಾರ್ಜುನ ನೇತೃತ್ವದಲ್ಲಿ ಬೆಂಗಳೂರು ಮತ್ತು ಮೈಸೂರಿನ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಾದ ರಂಜಿತ್ ಎನ್., ಇಮ್ತಿಯಾಜ್ ಪಾಷ, ಕುಮಾರಸ್ವಾಮಿ, ವಿಜಯಕುಮಾರ್, ರಾಮಚಂದ್ರ, ಅಲಿ ಉದ್ದೀನ್ ತಂಡ ಕಾರ್ಯಾಚರಣೆ ನಡೆಸಿತ್ತು.</p>.<p>₹ 2 ಕೋಟಿ ಮೌಲ್ಯದ ಮರ್ಸಿಡಿಸ್ ಬೆಂಜ್ ಕಾರು ನಕಲಿ ದಾಖಲೆಗಳನ್ನು ಹೊಂದಿತ್ತು. ಉಳಿದ ನಾಲ್ಕು ಕಾರುಗಳು ಪುದುಚೇರಿಯ ನೋಂದಣಿ ಹೊಂದಿರುವ ರಾಜ್ಯದ ಕಾರುಗಳಾಗಿದ್ದವು.</p>.<p>ವಶಪಡಿಸಿಕೊಂಡಿರುವ ಕಾರುಗಳ ಮಾಲೀಕರಿಂದ ₹ 3.02 ಕೋಟಿ ತೆರಿಗೆ ವಸೂಲಿ ಮಾಡಲಾಗಿದೆ ಎಂದು ಸಿ. ಮಲ್ಲಿಕಾರ್ಜುನ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>