‘ಪದವೀಧರರಾದ ನಂಜೇಗೌಡ, ಸದ್ಯ ಕೃಷಿ ಮಾಡುತ್ತಿದ್ದಾರೆ. ಪರಿಚಯಸ್ಥರಾದ ಶಿವಪ್ಪ ಅವರ ಮೂಲಕ ವಿನಯ್ ಪರಿಚಯವಾಗಿತ್ತು. ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವುದಾಗಿ ಹೇಳಿದ್ದ ವಿನಯ್, ಸಂಸ್ಥೆಯ ನಿರ್ದೇಶಕರ ಮೂಲಕ ಕೆಲಸ ಕೊಡಿಸುವುದಾಗಿ ಹೇಳಿದ್ದರು. ಅದಕ್ಕೆಂದು ₹ 2.50 ಲಕ್ಷ ಪಡೆದಿದ್ದ ಅವರು ವರ್ಷವಾದರೂ ಕೆಲಸ ಕೊಡಿಸಿಲ್ಲ. ಹಣವನ್ನೂ ವಾಪಸು ಕೊಟ್ಟಿಲ್ಲ. ಹಣ ಕೇಳಿದರೆ ತಮ್ಮ ವಿರುದ್ಧವೇ ಪ್ರಕರಣ ದಾಖಲಿಸುವುದಾಗಿ ಹೆದರಿಸುತ್ತಿದ್ದಾರೆಂದು ನಂಜೇಗೌಡ ದೂರಿದ್ದಾರೆ’ ಎಂದೂ ತಿಳಿಸಿದರು.