‘ಗೃಹಜ್ಯೋತಿ’ ಯೋಜನೆಯಿಂದ ಕೆಲವರು ವಿದ್ಯುತ್ ಬಳಕೆಯಲ್ಲಿ ಶೂನ್ಯ ಬಿಲ್ ಪಡೆದರೆ, ಹಲವರು ಶುಲ್ಕದಲ್ಲಿ ಸಬ್ಸಿಡಿ ಪಡೆಯುತ್ತಿದ್ದಾರೆ. ಇದರಿಂದಾಗಿ ಗೃಹಬಳಕೆ ವಿದ್ಯುತ್ಗಾಗಿ ಸೌರ ಮೇಲ್ಛಾವಣಿ ಅಳವಡಿಸುವವರ ಸಂಖ್ಯೆ ಕಡಿಮೆಯಾಗಿದೆ. ಕರ್ನಾಟಕ ನವೀಕರಿಸಬಹುದಾದ ಇಂಧನ ಉಪಕರಣಗಳ ತಯಾರಕರ ಸಂಘದ ಪ್ರಕಾರ ಗೃಹಜ್ಯೋತಿ ಯೋಜನೆ ಪ್ರಾರಂಭವಾದಾಗಿನಿಂದ ಸೌರ ಮೇಲ್ಛಾವಣಿ ಅಳವಡಿಕೆಗೆ ನಗರದ ಜನರು ಆಸಕ್ತಿ ತೋರುತ್ತಿಲ್ಲ.