‘ರಾಜ್ಯ ಮತ್ತು ರಾಷ್ಟ್ರ ಮಟ್ಟದ ಎಲ್ಲಾ ಧರ್ಮಗುರು, ಸಂತರು, ಸಾಂಸ್ಕೃತಿಕ ಚಿಂತಕರು, ಸಂಸ್ಕೃತಿ ಚಿಂತಕರನ್ನು ಒಂದೆಡೆ ಸೇರಿಸುವ ಪ್ರಯತ್ನ ಇದಾಗಿದೆ. ಅಂದು ಬೆಳಿಗ್ಗೆ 8 ಗಂಟೆಗೆ ಮುರುಘಾ ಶರಣರು ‘ಶಿವಯೋಗ ಸಂಭ್ರಮ’ ನೆರವೇರಿಸಲಿದ್ದು, 10 ಗಂಟೆಗೆ ಗಣಮೇಳ ಆರಂಭವಾಗಲಿದ್ದು, ಸಂಜೆ 5ರವರೆಗೆ ನಡೆಯಲಿದೆ’ ಎಂದು ವಿವರಿಸಿದ್ದಾರೆ.