‘ಮಹಾಲೆಕ್ಕಪಾಲರ ವರದಿಯಲ್ಲಿ ಹಣ ಬಳಕೆ ಆಗಿಲ್ಲ ಎಂದು ನಮೂದಾಗಿರುವುದು ಗೊಂದಲಕ್ಕೆ ಕಾರಣವಾಗಿರುವುದು ನಿಜ. ಸಾಮಾನ್ಯವಾಗಿ ಆಯವ್ಯಯದಲ್ಲಿ ಹಣ ನಿಗದಿ ಮಾಡುವಾಗ ಕೇಂದ್ರದಿಂದ ಇಂತಿಷ್ಟು ಹಣ ಬರಬಹುದು ಎಂಬ ನಿರೀಕ್ಷೆ ಇಟ್ಟುಕೊಂಡಿರುತ್ತವೆ. ನಿರೀಕ್ಷೆ ಮಾಡಿದಷ್ಟು ಹಣ ಬರದೇ ಇದ್ದಾಗ, ಅಲ್ಲಿಂದ ಬಂದ ಅನುದಾನಕ್ಕೆ ಅನುಗುಣವಾಗಿ ರಾಜ್ಯದ ಪಾಲು ನೀಡುತ್ತೇವೆ’ ಎಂದು ಸಚಿವರು ತಿಳಿಸಿದರು.