ಕರ್ನಾಟಕ ವಲಯದ ಕೇಂದ್ರ ತೆರಿಗೆಯ ಜಿಎಸ್ಟಿ ವಿಭಾಗದ ಪ್ರಧಾನ ಮುಖ್ಯ ಆಯುಕ್ತೆ ರಂಜನಾ ಜಹಾ ಮಾತನಾಡಿ, ‘ರಾಜ್ಯವು ತೆರಿಗೆ ಸಂಗ್ರಹದಲ್ಲಿ ದ್ವಿತೀಯ ಸ್ಥಾನದಲ್ಲಿದ್ದರೆ, ಅನುಷ್ಠಾನದಲ್ಲಿ ಮೊದಲ ಸ್ಥಾನದಲ್ಲಿದೆ. ಸಾರ್ವಜನಿಕರ ಸಹಕಾರ ಬಹಳ ಮುಖ್ಯ. ಏಕರೂಪದ ತೆರಿಗೆಯಿಂದ ಅನುಕೂಲ ಇದೆ. ಆರಂಭಿಕ ಹಂತದಲ್ಲಿ ಗೊಂದಲವಿದ್ದರೂ ಕ್ರಮೇಣ ಬದಲಾವಣೆಗಳನ್ನು ತರಲಾಗಿದೆ. ಪ್ರಾಮಾಣಿಕ ತೆರಿಗೆ ಪಾವತಿದಾರರಿಗೆ ಸಮಸ್ಯೆ ಆಗಬಾರದು’ ಎಂದು ಹೇಳಿದರು.