‘ಯಕ್ಷಗಾನದ ಹಿಮ್ಮೇಳದವರೇ ಪಾತ್ರಧಾರಿಗಳಾಗಿ ಮಾತಿನ ಮನೆ ಕಟ್ಟುವುದು ಈ ತಾಳಮದ್ದಲೆಯ ವೈಶಿಷ್ಟ್ಯ. ಯಕ್ಷಗಾನ ಕಲಾವಿದರಾದ ದೇವರಾಜ ಕರಬರು ಕಾರ್ಯಕ್ರಮದ ಸಂಯೋಜಕರಾಗಿದ್ದು, ರಾಧಾಕೃಷ್ಣ ಉರಾಳ ಅವರು ‘ಗುಡಿ ನಡೆ’ಯ ನಿರ್ದೇಶಕರು. ವಿದ್ವಾನ್ ಎ.ಪಿ.ಪಾಠಕ್, ಸುಬ್ರಾಯ ಹೆಬ್ಬಾರ, ಅಂಬರೀಷ್ ಭಟ್ ಹಾಗೂ ಪ್ರದೀಪ ಸಾಮಗ ಅವರು ಇದರಲ್ಲಿ ಪಾಲ್ಗೊಳ್ಳುವ ಕಲಾವಿದರಾಗಿದ್ದಾರೆ’ ಎಂದು ಪ್ರಕಟಣೆ ತಿಳಿಸಿದೆ.