ಹೊಳೆನರಸೀಪುರ: ಜಮೀನಿಗೆ ನೀರು ಹಾಯಿಸಲು ತಾಲ್ಲೂಕಿನ ಮೂಲೆಕಾಳೇನಹಳ್ಳಿ ಗ್ರಾಮದ ಗ್ರಾಮ ಪಂಚಾಯ್ತಿ ಸದಸ್ಯೆಯೊಬ್ಬರ ಪತಿ ಗ್ರಾಮದೊಳಗಿನ ರಸ್ತೆ ಅಗೆದು ಅಕ್ರಮವಾಗಿ ಪೈಪ್ ಅಳವಡಿಸಿ ಕೊಂಡಿದ್ದಾರೆ ಎಂದು ಗ್ರಾಮಸ್ಥರು ದೂರಿದ್ದಾರೆ.ಗ್ರಾಮದ ಕೆಲವು ಮನೆಗಳವರು ದಶಕಗಳಿಂದ ಬಳಸುತ್ತಿದ್ದ ಅಗೆದು ಹಾಕಿದ್ದು ಅಲ್ಲಿದ್ದ ಮರಗಳನ್ನು ಕಡಿದು ದೌರ್ಜನ್ಯ ನಡೆಸಿದ್ದಾರೆ ಎಂದು ಗ್ರಾಮದ ಪಾರ್ವತಮ್ಮ, ಮಹೇಶ, ಬಸಮ್ಮಣ್ಣಿ, ಗೌರಮ್ಮ, ಮುತ್ತಮ್ಮ, ಸುರೇಶ, ಶಿಕ್ಷಕ ಮಲ್ಲೇಶ್, ಜಯಮ್ಮ, ನಂಜಮ್ಮ ಧರ್ಮೇಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.