ಪಶು ಸಂಗೋಪನೆ ಇಲಾಖೆಗಾಗಿ ಸೀತಕೆಂಪನಹಳ್ಳಿ, ಬ್ಯಾತ, ಹಾರೋಹಳ್ಳಿ ಪಾಳ್ಯ, ಕಾಕೋಳು ಗ್ರಾಮಗಳು ಸ್ಥಳಾಂತರವಾದವು. ಸ್ಥಳಾಂತರಕ್ಕೆ ಮುಂಚೆ ಹನುಮ ಜಯಂತಿಯಂದು ದೊಡ್ಡ ಜಾತ್ರೆಯೇ ನಡೆಯುತ್ತಿತ್ತು. ಹೆಸರಘಟ್ಟ ಕೆರೆಯ ಸುತ್ತ ಮುತ್ತಲಿನ ಎಲ್ಲ ಗ್ರಾಮಸ್ಥರು ಬಂದು ಜಾತ್ರೆಯಲ್ಲಿ ಭಾಗಿಯಾಗುತ್ತಿದ್ದರು. ಜಾತ್ರೆಯ ದಿನದಲ್ಲಿ ರಾಗಿ, ಮೆಕ್ಕೆಜೋಳ, ವಿವಿಧ ತರಕಾರಿಗಳನ್ನು ರೈತರು ತಂದು ಮಾರಾಟ ಮಾಡುತ್ತಿದ್ದರು. ಹೆಣ್ಣು ಗಂಡುಗಳನ್ನು ತೋರಿಸುತ್ತಿದ್ದರು. ನವ ದಂಪತಿ ಬರಲೇ ಬೇಕು ಎನ್ನುವ ಅಲಿಖಿತ ನಿಯಮ ಇಲ್ಲಿತ್ತು ಎನ್ನುತ್ತಾರೆ ಸೀತಕೆಂಪನಹಳ್ಳಿ ಗ್ರಾಮದ ನಿವಾಸಿ ಗೀತಮ್ಮ ಮುನಿಯಪ್ಪ.