‘ಜೆಡಿಎಸ್ನಲ್ಲಿ ಇದ್ದಾಗ ನಾನೂ ಸಿದ್ದರಾಮಯ್ಯ ವಿರುದ್ಧ ಮಾತನಾಡಿದ್ದೆ. ಕಾಂಗ್ರೆಸ್– ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಕುಮಾರಸ್ವಾಮಿ ನನಗೆ ಹಜ್ ಖಾತೆ ಕೊಟ್ಟಿದ್ದರು. ಕುಮಾರಸ್ವಾಮಿ ನನ್ನ ಯೋಗ್ಯತೆಯನ್ನು ಅಳೆದಿದ್ದ ರೀತಿ ಹಾಗಿತ್ತು. ನಾನು ಕಾಂಗ್ರೆಸ್ಗೆ ಬಂದ ತಕ್ಷಣ ನನಗೆ ಆಹಾರ ಖಾತೆ ಕೊಟ್ಟರು. ನನ್ನನ್ನು ಮುಗಿಸಬೇಕು ಅಂದುಕೊಂಡಿದ್ದರೆ, ಸಿದ್ದರಾಮಯ್ಯ ನನಗೆ ಆಹಾರ ಖಾತೆ ಕೊಡಿಸುತ್ತಿರಲಿಲ್ಲ’ ಎಂದು ವಿವರಿಸಿದರು.