‘ಸಾರ್ವಜನಿಕರನ್ನು ಒಳಗೆ ಬಿಡಲು ಹೋಟೆಲ್ನವರಿಗೆ ಇರಬಹುದಾದ ಕಾರಣಗಳ ಬಗ್ಗೆ ನಮಗೆ ಆಸಕ್ತಿಯಿಲ್ಲ. ಆದರೆ, ಗಾಂಧಿ ಜಯಂತಿ ಹಾಗೂ ಹುತಾತ್ಮರ ದಿನಗಳಂದು ಈ ಪ್ರದೇಶದಲ್ಲಿ ಸಾರ್ವಜನಿಕರಿಗೆ ದೇಶಭಕ್ತಿ ಗೀತೆ, ಭಜನೆಗಳನ್ನು ಆಯೋಜಿಸಲು ಈ ಜಾಗ ಮುಕ್ತವಾಗಿರಬೇಕು ಎಂದು ನಾವು ಬಯಸುತ್ತೇವೆ. ಹಾಗಾಗಿ ಈ ಪ್ರದೇಶದ ಭೇಟಿಗೆ ಅವಕಾಶ ನೀಡಲು ನಿರ್ದೇಶಿಸಬೇಕು’ ಎಂದು ಕೋರಿದ್ದರು. ಅರ್ಜಿದಾರರ ಪರ ಜಿ.ಆರ್.ಮೋಹನ್ ವಾದ ಮಂಡಿಸಿದರು.