‘ದೇವಾಲಯಗಳಲ್ಲಿ ಸೇವೆ ಮಾಡುವವರು, ಮುಂಭಾಗದಲ್ಲಿ ಅಂಗಡಿ–ಮುಂಗಟ್ಟುಗಳನ್ನು ನಡೆಸುವವರು, ಜಾತ್ರೆಗಳಲ್ಲಿ ಭಾಗವಹಿಸುವ ಭಕ್ತಾದಿಗಳೆಲ್ಲರೂ ದೈವದ ಹೆಸರಲ್ಲಿ ಒಂದಾಗಿರುತ್ತಾರೆ. ದೇವರ ಆಲಯಗಳಿಂದಲೇ ಕಲೆ, ಮೌಲ್ಯಾಧಾರಿತ ಶಿಕ್ಷಣ ಬೆಳೆಯುತ್ತದೆ. ಇದನ್ನೇ ದೇವಸ್ಥಾನದ ಸಂಸ್ಕೃತಿ ಎನ್ನಲಾಗುತ್ತದೆ. ಧರ್ಮಸೂಕ್ಷ್ಮತೆಗಳ ಬಗ್ಗೆ ತಿಳುವಳಿಕೆ ಇಲ್ಲದವರು ಸಂಸ್ಕೃತಿಯ ನಿಯಮ, ಸಂಪ್ರದಾಯವನ್ನು ಹಾಳು ಮಾಡುತ್ತಿದ್ದಾರೆ. ಯಾರ ಪರವಾಗಿ ನಿಲ್ಲಬೇಕೆಂಬ ಗೊಂದಲ ಹಿಂದೂಗಳಲ್ಲೂ ಮೂಡುತ್ತಿದೆ. ಹಾಗಾಗಿ ಅವರು ತಟಸ್ಥರಾಗಿದ್ದಾರೆ. ಆ ತಟಸ್ಥತೆಯಿಂದಲೂ ಸಂಸ್ಕೃತಿ ನಶಿಸುತ್ತದೆ’ ಎಂಬ ಅಭಿಪ್ರಾಯ ಮಾತುಕತೆಯಿಂದ ಹೊಮ್ಮಿತು.