‘ಕುದುರೆ ರೇಸ್ ಬೆಟ್ಟಿಂಗ್ ಬಗ್ಗೆ ಮಾಹಿತಿ ಬಂದಿತ್ತು. ರಾಜೀವ್ ಗಾಂಧಿ ವೃತ್ತ ಬಳಿ ಹೋಟೆಲ್ವೊಂದರ ಮೇಲೆ ದಾಳಿ ಮಾಡಿ ಆರೋಪಿಗಳಾದ ಕೆ. ಸುರೇಶ್ ಹಾಗೂ ಎನ್. ಆನಂದ್ ಎಂಬುವವರನ್ನು ವಶಕ್ಕೆ ಪಡೆಯಲಾಗಿದೆ. ಇವರಿಂದ ₹ 8,100 ನಗದು, ಎರಡು ಮೊಬೈಲ್ ಹಾಗೂ ಬೆಟ್ಟಿಂಗ್ಗೆ ಸಂಬಂಧಪಟ್ಟ ಸಾಮಗ್ರಿ ಜಪ್ತಿ ಮಾಡಲಾಗಿದೆ’ ಎಂದು ಮೂಲಗಳು ಹೇಳಿವೆ.