ಕೇಂದ್ರ ರಸಗೊಬ್ಬರ ಸಚಿವ ಡಿ.ವಿ.ಸದಾನಂದಗೌಡ ಮಾತನಾಡಿ, ‘ಉದ್ಯೋಗ ಸೃಷ್ಟಿಯಾಗುತ್ತಿಲ್ಲ ಎಂದು ಬೊಬ್ಬೆ ಹೊಡೆಯುವವರಿಗೆ ಕೃಷಿ ಕ್ಷೇತ್ರ ಮಾತ್ರ ಪರಿಹಾರ ಕೊಡಬಲ್ಲದು’ ಎಂದು ಹೇಳಿದರು. ‘ಕೃಷಿ ಕ್ಷೇತ್ರದ ಉತ್ಪಾದನಾ ವೆಚ್ಚಕ್ಕೆ ಎರಡು ಪಟ್ಟು ಆದಾಯ ಸಿಗುವಂತೆ ಆಗಬೇಕು ಎಂಬ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಸಾಕಷ್ಟು ಪ್ರಯತ್ನಿಸುತ್ತಿದೆ’ ಎಂದರು.