ವಿಧಾನಸಭೆಯಲ್ಲಿ ಮಂಗಳವಾರ ಕಾಂಗ್ರೆಸ್ನ ರಿಜ್ವಾನ್ ಅರ್ಷದ್ ಅವರ ಗಮನ ಸೆಳೆಯುವ ಸೂಚನೆಗೆ ಉತ್ತರ ನೀಡಿದ ಸಚಿವರು, ‘ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ದೂರುಗಳು ಬರುತ್ತಿವೆ. ಆನ್ಲೈನ್ ಮೂಲಕವೂ ದೂರು ಸಲ್ಲಿಸಲು ಅವಕಾಶ ನೀಡಲಾಗಿದೆ. ಇದು ಮುಕ್ತಾಯವಾಗದ ಹೊರತು ಹಗರಣದ ಮೌಲ್ಯ ಎಷ್ಟು ಎಂಬುದು ನಿರ್ಧಾರಕ್ಕೆ ಬರಲು ಆಗದು’ ಎಂದರು.