ಕಂದಾಯ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮಹೇಂದ್ರ ಜೈನ್ ಸಲ್ಲಿಸಿದ್ದ ಅನುಸರಣಾ ಪ್ರಮಾಣ ಪತ್ರವನ್ನು ಪರಿಶೀಲಿಸಿದ ಪೀಠ, ‘ಸಿಬಿಐ ಅಂತಿಮ ವರದಿ ನೀಡುವ ತನಕ ರಾಜ್ಯ ಸರ್ಕಾರ ಕಾಯಲು ಆಗುವುದಿಲ್ಲ. ಅಂತಿಮ ವರದಿಗೆ ಕಾಯುತ್ತಿದ್ದರೆ ಅಷ್ಟರಲ್ಲಿ ಆಸ್ತಿಯೇ ಅಸ್ತಿತ್ವದಲ್ಲಿ ಇಲ್ಲದಂತೆ ಆಗಬಹುದು. ಸಿಬಿಐನಿಂದ ಮಾಹಿತಿ ಕೇಳುವ ನಿಲುವು ಸಂಪೂರ್ಣ ತಪ್ಪು. ಹಣಕಾಸು ಸಂಸ್ಥೆಗಳಲ್ಲಿ ಠೇವಣಿದಾರರ ಹಿತಾಸಕ್ತಿ ಸಂರಕ್ಷಣೆ (ಕೆಪಿಐಡಿ) ಕಾಯ್ದೆ 2004ರ ಅಡಿಯಲ್ಲಿ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ರಾಜ್ಯ ಸರ್ಕಾರಕ್ಕೆ ಅಧಿಕಾರ ಇದೆ’ ಎಂದು ಪೀಠ ಹೇಳಿತು.