ನಂತರ ಈ ಜ್ಯೋತಿ ಯಾತ್ರೆಯು ದಿವಂಗತ ಜೆಪಿಎ ನೊರೊನ್ಹಾ ಅವರ ನಿವಾಸದತ್ತ ತೆರಳಿತು. ನೊರೊನ್ಹಾ ಅವರು 1971ರ ಯುದ್ಧದಲ್ಲಿ ಭಾರತೀಯ ನೌಕಾ ಪಡೆಯ ‘ಐಎನ್ಎಸ್ ಪನ್ವೇಲ್’ ಯುದ್ಧ ನೌಕೆಯ ಕಮಾಂಡರ್ ಆಗಿ ಕಾರ್ಯನಿರ್ವಹಿಸಿದ್ದರು. ಅವರ ನೇತೃತ್ವದಲ್ಲಿ ಭಾರತೀಯ ಹಡಗು ಮೋಂಗ್ಲಾ ಮತ್ತು ಖುಲ್ನ ಪ್ರದೇಶಗಳಲ್ಲಿ 1971ರ ಡಿ.8ರಿಂದ 11ರವರೆಗೆ ಸತತವಾಗಿ ದಾಳಿ ನಡೆಸಿತ್ತು. ಸತತವಾಗಿ ನಡೆಯುತ್ತಿದ್ದ ವಾಯು ದಾಳಿಯನ್ನೂ ಲೆಕ್ಕಿಸದೆ ಹಡಗನ್ನು ಮುನ್ನಡೆಸಿದ್ದರಲ್ಲದೇ, ಎದುರಾಳಿಯ ಕರಾವಳಿ ರಕ್ಷಣಾ ಪಡೆಯ ದಾಳಿಯನ್ನು ಹಿಮ್ಮೆಟ್ಟಿಸಿದ್ದರು. ನಿರ್ಬಂಧಿತ ಪ್ರದೇಶಗಳಿಗೂ ಹಡಗನ್ನು ನುಗ್ಗಿಸಿ ವಿರೋಧಿಗಳಿಗೆ ಭಾರಿ ಹಾನಿಯನ್ನು ಉಂಟುಮಾಡುವಲ್ಲಿ ನೊರೊನ್ಹಾ ಯಶಸ್ವಿಯಾಗಿದ್ದರು. ರವಿ ವಿಕ್ಟರ್ ಅವರು ನೊರೊನ್ಹಾ ಅವರ ಪತ್ನಿ ಟಿಬಿಎಂ ನೊರೊನ್ಹಾ ಅವರಿಗೆ ವಿಜಯ ಜ್ಯೋತಿಯನ್ನು ಹಸ್ತಾಂತರಿಸುವ ಮೂಲಕ ಗೌರವಿಸಿದರು.