‘ಟೆಂಡರ್ ಕರೆದು ಇಂದಿರಾ ಕ್ಯಾಂಟೀನ್ಗಳ ನಿರ್ವಹಣೆ ವಹಿಸಿದಾಗ ಏನಾಯಿತು ಎಂಬುದನ್ನು ನಾವು ನೋಡಿದ್ದೇವೆ. ಈ ಕ್ಯಾಂಟೀನ್ ಗಳನ್ನು ಉದಾತ್ತ ಉದ್ದೇಶಕ್ಕಾಗಿ ತೆರೆಯಲಾಗಿದ್ದು, ಬಿಬಿಎಂಪಿ ಜತೆ ನಿಸ್ವಾರ್ಥವಾಗಿ ಕೆಲಸ ಮಾಡುವ ಪಾಲುದಾರರ ಅಗತ್ಯವಿದೆ. ಪೌರ ಕಾರ್ಮಿಕರು, ಶಾಲಾ ಮಕ್ಕಳಿಗೆ ಇಸ್ಕಾನ್ ಆಹಾರ ಪೂರೈಸುತ್ತಿರುವ ವಿಧಾನ ನೋಡಿದರೆ ಉತ್ತಮವಾಗಿ ನಿರ್ವಹಿಸುತ್ತದೆ ಎಂಬ ನಂಬಿಕೆ ಇದೆ. ಫಲಾನುಭವಿಗಳು ಉಪಾಹಾರಕ್ಕೆ ₹5 ಮತ್ತು ಮಧ್ಯಾಹ್ನದ ಊಟಕ್ಕೆ ₹10 ಪಾವತಿಸಲಿದೆ. ಹೆಚ್ಚುವರಿ ಹೊರೆಯನ್ನು ಬಿಬಿಎಂಪಿ ಭರಿಸಲಿದೆ’ ಎಂದರು.