<p><strong>ಬೆಂಗಳೂರು:</strong>ಇನ್ಫೋಸಿಸ್ ವಿಜ್ಞಾನ ಪ್ರತಿಷ್ಠಾನದ ವತಿಯಿಂದ ನೀಡಲಾಗುವ ಇನ್ಫೊಸಿಸ್ ಪ್ರೈಸ್ –2018 ಪ್ರಶಸ್ತಿ ಪ್ರದಾನ ಸಮಾರಂಭ ನಗರದಲ್ಲಿ ಶನಿವಾರ ನಡೆಯಿತು.</p>.<p>6 ಕ್ಷೇತ್ರಗಳ ಸಾಧಕರಿಗೆ ತಲಾ ₹1ಲಕ್ಷ ಅಮೆರಿಕನ್ ಡಾಲರ್ ನಗದು ಬಹುಮಾನ ಮತ್ತು ಚಿನ್ನದ ಪದಕವನ್ನು ಪ್ರಿನ್ಸ್ಟನ್ ವಿಶ್ವವಿದ್ಯಾಲಯದ ಗಣಿತಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಮಂಜುಳ್ ಭಾರ್ಗವ ಪ್ರದಾನ ಮಾಡಿದರು.</p>.<p>ಪ್ರಶಸ್ತಿ ವಿಜೇತರು: ಎಂಜಿನಿಯರಿಂಗ್ ಮತ್ತು ಕಂಪ್ಯೂಟರ್ ವಿಜ್ಞಾನ: ನವಕಾಂತ ಭಟ್ (ಸೆಂಟರ್ ಫಾರ್ ನ್ಯಾನೋ ಸೈನ್ಸ್ ಆಂಡ್ ಎಂಜಿನಿಯರಿಂಗ್ ಮುಖ್ಯಸ್ಥ, ಭಾರತೀಯ ವಿಜ್ಞಾನ ಸಂಸ್ಥೆ ಬೆಂಗಳೂರು.) ಜೈವಿಕ ರಸಾಯನಶಾಸ್ತ್ರದಲ್ಲಿ ಹೊಸ ಬಗೆಯ ಬಯೋಸೆನ್ಸರ್ಗಳ ವಿನ್ಯಾಸ ಮಾಡಿದ್ದು.</p>.<p>ಮಾನವಿಕ ವಿಭಾಗ: ಕವಿತಾ ಸಿಂಗ್ (ನವದೆಹಲಿಯಜವಾಹರಲಾಲ್ ನೆಹರು ವಿಶ್ವವಿದ್ಯಾಲಯ) ಮೊಘಲ್, ರಜಪೂತ ಹಾಗೂ ಡೆಕ್ಕನ್ ಕಲೆಗಳ ಕುರಿತ ಅಧ್ಯಯನ, ಮ್ಯೂಸಿಯಂಗಳ ಐತಿಹಾಸಿಕ ಕಾರ್ಯಕ್ಷಮತೆ ಹಾಗೂ ಅವುಗಳ ಪಾತ್ರ ಮತ್ತು ಪ್ರಾಮುಖ್ಯತೆ ಕುರಿತ ಬರವಣಿಗೆಗಾಗಿ.</p>.<p><strong>ಜೀವ ವಿಜ್ಞಾನ:</strong> ರೂಪ್ ಮಲಿಕ್ (ಟಾಟಾ ಇನ್ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್, ಮುಂಬೈ) ಮಾಲಿಕ್ಯುಲರ್ ಮೋಟರ್ ಪ್ರೊಟೀನ್ಗಳ ಕುರಿತಾದ ಅಧ್ಯಯನಕ್ಕಾಗಿ.</p>.<p><strong>ಗಣಿತ ವಿಜ್ಞಾನ: </strong>ನಳಿನಿ ಅನಂತರಾಮನ್, (ಫ್ರಾನ್ಸ್ನ ಸ್ಟ್ರಾಸ್ ಬರ್ಗ್ ವಿಶ್ವವಿದ್ಯಾಲಯ) ಕ್ವಾಂಟಮ್ ಚಾವೋಸ್ ವಿಚಾರದಲ್ಲಿ ನಡೆಸಿದ ಅಧ್ಯಯನಕ್ಕಾಗಿ.</p>.<p><strong>ಶಾರೀರಿಕ ವಿಜ್ಞಾನ:</strong> ಎಸ್.ಕೆ. ಸತೀಶ್, (ದೇವೇಚಾ ಸೆಂಟರ್ ಫಾರ್ ಕ್ಲೈಮೇಟ್ ಚೇಂಜ್ನ ನಿರ್ದೇಶಕ) ಹವಾಮಾನ ವೈಪರೀತ್ಯ ಕ್ಷೇತ್ರದಲ್ಲಿ ನಡೆಸಿದ ವೈಜ್ಞಾನಿಕ ಅಧ್ಯಯನ. ಬ್ಲ್ಯಾಕ್ ಕಾರ್ಬನ್ ಏರೋಸೋಲ್ಸ್ ಬಗ್ಗೆ ಅಧ್ಯಯನ.</p>.<p><strong>ಸಮಾಜ ವಿಜ್ಞಾನ:</strong> ಸೆಂಧಿಲ್ ಮುಳ್ಳೈನಾಥನ್, (ಷಿಕಾಗೊ ವಿಶ್ವವಿದ್ಯಾಲಯ) ನಡವಳಿಕೆಗೆ ಸಂಬಂಧಿಸಿದ ಅರ್ಥಶಾಸ್ತ್ರ ಕುರಿತ ಸಾಧನೆಗಾಗಿ.</p>.<p>ಅಪೌಷ್ಟಿಕತೆ ನಿವಾರಣೆ ಕುರಿತು ತಂತ್ರಜ್ಞಾನ ರೂಪಿಸಿದ ವಿದ್ಯಾರ್ಥಿಗಳ ತಂಡಕ್ಕೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಈ ತಂಡಕ್ಕೆ 5 ಲಕ್ಷ ವಿದ್ಯಾರ್ಥಿ ವೇತನ, ರಾಕೆಟ್ ಉಡಾವಣೆ ಸಂದರ್ಭದಲ್ಲಿ ಶ್ರೀಹರಿಕೋಟಾದಲ್ಲಿನ ಇಸ್ರೋ ಕೇಂದ್ರಕ್ಕೆ ಭೇಟಿ ನೀಡುವ ಅವಕಾಶ,‘ನ್ಯಾಸ್’ ಸಂಸ್ಥೆಯ ಜ್ಯೂನಿಯರ್ ಅಕಾಡೆಮಿಯ ಸದಸ್ಯತ್ವ ಘೋಷಿಸಲಾಯಿತು.</p>.<p class="Subhead"><strong>ವಿದ್ಯಾರ್ಥಿಗಳು ಮಾಡಿದ್ದೇನು?:</strong></p>.<p>ಅರ್ಣಬ್, ಸುಮಿತ್, ಆರ್ಜೂ ಅವರ ತಂಡ ನ್ಯೂಟ್ರಿ ಆ್ಯಪ್ ಸಿದ್ಧಪಡಿಸಿದೆ. ಐದು ವರ್ಷದೊಳಗಿನ ಮಗುವಿನ ತಾಯಂದಿರಿಗೆ ಸಾರ್ವಜನಿಕ ಪಡಿತರ ವ್ಯವಸ್ಥೆ ಸರಿಯಾಗಿ ಸಿಗುವಂತಾಗಲು ಈ ಆ್ಯಪ್ ಕಾರ್ಯನಿರ್ವಹಿಸಲಿದೆ.</p>.<p>ಇನ್ನೊಂದು ತಂಡ ಅರುಣಿಮಾ ಎಸ್., ಕೇಶವ ಡಿ.ಕೆ, ಲೀಲಾ ಜೆ, ಪ್ರಥ್ವಿ ಎಸ್ ಮತ್ತು ಸಂದೀಪ್ ಆರ್. ಅವರದ್ದು. ಅಂಗನವಾಡಿಗಳಲ್ಲಿ ಅಡುಗೆ ತಯಾರಿಕೆಗೆ ಬಳಸುವ ನೀರಿಗೆ ಪೋಷಕಾಂಶ, ಖನಿಜಾಂಶಗಳನ್ನು ಬೆರೆಸಿ ಪೂರೈಸುವ ಯೋಜನೆಯೊಂದನ್ನು ಈ ತಂಡ ಪರಿಚಯಿಸಿದೆ.</p>.<p>ಈಗಾಗಲೇ ಮಾರುಕಟ್ಟೆಯಲ್ಲಿ ಲಭ್ಯವಿರುವ ಈ ನೀರನ್ನು ದೊಡ್ಡ ಪ್ರಮಾಣದಲ್ಲಿ ಉತ್ಪಾದಿಸಿ ಅಪೌಷ್ಟಿಕತೆ ಸಮಸ್ಯೆಯುಳ್ಳ ಪ್ರದೇಶಗಳಿಗೆ ಪೂರೈಸಬಹುದು ಎಂದು ಈ ತಂಡ ಸಲಹೆ ಮಾಡಿದೆ.</p>.<p>ವಿಜ್ಞಾನ ಪ್ರತಿಷ್ಠಾನದ ಅಧ್ಯಕ್ಷ ಕೆ. ದಿನೇಶ್, ಟ್ರಸ್ಟಿಗಳಾದ ಎನ್.ಆರ್.ನಾರಾಯಣಮೂರ್ತಿ, ಟಿ.ವಿ. ಮೋಹನ್ ದಾಸ್ ಪೈ, ಎಸ್. ಗೋಪಾಲಕೃಷ್ಣನ್, ಎಸ್.ಡಿ. ಶಿಬುಲಾಲ್, ಶ್ರೀನಾಥ್ ಬಾಟ್ನಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong>ಇನ್ಫೋಸಿಸ್ ವಿಜ್ಞಾನ ಪ್ರತಿಷ್ಠಾನದ ವತಿಯಿಂದ ನೀಡಲಾಗುವ ಇನ್ಫೊಸಿಸ್ ಪ್ರೈಸ್ –2018 ಪ್ರಶಸ್ತಿ ಪ್ರದಾನ ಸಮಾರಂಭ ನಗರದಲ್ಲಿ ಶನಿವಾರ ನಡೆಯಿತು.</p>.<p>6 ಕ್ಷೇತ್ರಗಳ ಸಾಧಕರಿಗೆ ತಲಾ ₹1ಲಕ್ಷ ಅಮೆರಿಕನ್ ಡಾಲರ್ ನಗದು ಬಹುಮಾನ ಮತ್ತು ಚಿನ್ನದ ಪದಕವನ್ನು ಪ್ರಿನ್ಸ್ಟನ್ ವಿಶ್ವವಿದ್ಯಾಲಯದ ಗಣಿತಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಮಂಜುಳ್ ಭಾರ್ಗವ ಪ್ರದಾನ ಮಾಡಿದರು.</p>.<p>ಪ್ರಶಸ್ತಿ ವಿಜೇತರು: ಎಂಜಿನಿಯರಿಂಗ್ ಮತ್ತು ಕಂಪ್ಯೂಟರ್ ವಿಜ್ಞಾನ: ನವಕಾಂತ ಭಟ್ (ಸೆಂಟರ್ ಫಾರ್ ನ್ಯಾನೋ ಸೈನ್ಸ್ ಆಂಡ್ ಎಂಜಿನಿಯರಿಂಗ್ ಮುಖ್ಯಸ್ಥ, ಭಾರತೀಯ ವಿಜ್ಞಾನ ಸಂಸ್ಥೆ ಬೆಂಗಳೂರು.) ಜೈವಿಕ ರಸಾಯನಶಾಸ್ತ್ರದಲ್ಲಿ ಹೊಸ ಬಗೆಯ ಬಯೋಸೆನ್ಸರ್ಗಳ ವಿನ್ಯಾಸ ಮಾಡಿದ್ದು.</p>.<p>ಮಾನವಿಕ ವಿಭಾಗ: ಕವಿತಾ ಸಿಂಗ್ (ನವದೆಹಲಿಯಜವಾಹರಲಾಲ್ ನೆಹರು ವಿಶ್ವವಿದ್ಯಾಲಯ) ಮೊಘಲ್, ರಜಪೂತ ಹಾಗೂ ಡೆಕ್ಕನ್ ಕಲೆಗಳ ಕುರಿತ ಅಧ್ಯಯನ, ಮ್ಯೂಸಿಯಂಗಳ ಐತಿಹಾಸಿಕ ಕಾರ್ಯಕ್ಷಮತೆ ಹಾಗೂ ಅವುಗಳ ಪಾತ್ರ ಮತ್ತು ಪ್ರಾಮುಖ್ಯತೆ ಕುರಿತ ಬರವಣಿಗೆಗಾಗಿ.</p>.<p><strong>ಜೀವ ವಿಜ್ಞಾನ:</strong> ರೂಪ್ ಮಲಿಕ್ (ಟಾಟಾ ಇನ್ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್, ಮುಂಬೈ) ಮಾಲಿಕ್ಯುಲರ್ ಮೋಟರ್ ಪ್ರೊಟೀನ್ಗಳ ಕುರಿತಾದ ಅಧ್ಯಯನಕ್ಕಾಗಿ.</p>.<p><strong>ಗಣಿತ ವಿಜ್ಞಾನ: </strong>ನಳಿನಿ ಅನಂತರಾಮನ್, (ಫ್ರಾನ್ಸ್ನ ಸ್ಟ್ರಾಸ್ ಬರ್ಗ್ ವಿಶ್ವವಿದ್ಯಾಲಯ) ಕ್ವಾಂಟಮ್ ಚಾವೋಸ್ ವಿಚಾರದಲ್ಲಿ ನಡೆಸಿದ ಅಧ್ಯಯನಕ್ಕಾಗಿ.</p>.<p><strong>ಶಾರೀರಿಕ ವಿಜ್ಞಾನ:</strong> ಎಸ್.ಕೆ. ಸತೀಶ್, (ದೇವೇಚಾ ಸೆಂಟರ್ ಫಾರ್ ಕ್ಲೈಮೇಟ್ ಚೇಂಜ್ನ ನಿರ್ದೇಶಕ) ಹವಾಮಾನ ವೈಪರೀತ್ಯ ಕ್ಷೇತ್ರದಲ್ಲಿ ನಡೆಸಿದ ವೈಜ್ಞಾನಿಕ ಅಧ್ಯಯನ. ಬ್ಲ್ಯಾಕ್ ಕಾರ್ಬನ್ ಏರೋಸೋಲ್ಸ್ ಬಗ್ಗೆ ಅಧ್ಯಯನ.</p>.<p><strong>ಸಮಾಜ ವಿಜ್ಞಾನ:</strong> ಸೆಂಧಿಲ್ ಮುಳ್ಳೈನಾಥನ್, (ಷಿಕಾಗೊ ವಿಶ್ವವಿದ್ಯಾಲಯ) ನಡವಳಿಕೆಗೆ ಸಂಬಂಧಿಸಿದ ಅರ್ಥಶಾಸ್ತ್ರ ಕುರಿತ ಸಾಧನೆಗಾಗಿ.</p>.<p>ಅಪೌಷ್ಟಿಕತೆ ನಿವಾರಣೆ ಕುರಿತು ತಂತ್ರಜ್ಞಾನ ರೂಪಿಸಿದ ವಿದ್ಯಾರ್ಥಿಗಳ ತಂಡಕ್ಕೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಈ ತಂಡಕ್ಕೆ 5 ಲಕ್ಷ ವಿದ್ಯಾರ್ಥಿ ವೇತನ, ರಾಕೆಟ್ ಉಡಾವಣೆ ಸಂದರ್ಭದಲ್ಲಿ ಶ್ರೀಹರಿಕೋಟಾದಲ್ಲಿನ ಇಸ್ರೋ ಕೇಂದ್ರಕ್ಕೆ ಭೇಟಿ ನೀಡುವ ಅವಕಾಶ,‘ನ್ಯಾಸ್’ ಸಂಸ್ಥೆಯ ಜ್ಯೂನಿಯರ್ ಅಕಾಡೆಮಿಯ ಸದಸ್ಯತ್ವ ಘೋಷಿಸಲಾಯಿತು.</p>.<p class="Subhead"><strong>ವಿದ್ಯಾರ್ಥಿಗಳು ಮಾಡಿದ್ದೇನು?:</strong></p>.<p>ಅರ್ಣಬ್, ಸುಮಿತ್, ಆರ್ಜೂ ಅವರ ತಂಡ ನ್ಯೂಟ್ರಿ ಆ್ಯಪ್ ಸಿದ್ಧಪಡಿಸಿದೆ. ಐದು ವರ್ಷದೊಳಗಿನ ಮಗುವಿನ ತಾಯಂದಿರಿಗೆ ಸಾರ್ವಜನಿಕ ಪಡಿತರ ವ್ಯವಸ್ಥೆ ಸರಿಯಾಗಿ ಸಿಗುವಂತಾಗಲು ಈ ಆ್ಯಪ್ ಕಾರ್ಯನಿರ್ವಹಿಸಲಿದೆ.</p>.<p>ಇನ್ನೊಂದು ತಂಡ ಅರುಣಿಮಾ ಎಸ್., ಕೇಶವ ಡಿ.ಕೆ, ಲೀಲಾ ಜೆ, ಪ್ರಥ್ವಿ ಎಸ್ ಮತ್ತು ಸಂದೀಪ್ ಆರ್. ಅವರದ್ದು. ಅಂಗನವಾಡಿಗಳಲ್ಲಿ ಅಡುಗೆ ತಯಾರಿಕೆಗೆ ಬಳಸುವ ನೀರಿಗೆ ಪೋಷಕಾಂಶ, ಖನಿಜಾಂಶಗಳನ್ನು ಬೆರೆಸಿ ಪೂರೈಸುವ ಯೋಜನೆಯೊಂದನ್ನು ಈ ತಂಡ ಪರಿಚಯಿಸಿದೆ.</p>.<p>ಈಗಾಗಲೇ ಮಾರುಕಟ್ಟೆಯಲ್ಲಿ ಲಭ್ಯವಿರುವ ಈ ನೀರನ್ನು ದೊಡ್ಡ ಪ್ರಮಾಣದಲ್ಲಿ ಉತ್ಪಾದಿಸಿ ಅಪೌಷ್ಟಿಕತೆ ಸಮಸ್ಯೆಯುಳ್ಳ ಪ್ರದೇಶಗಳಿಗೆ ಪೂರೈಸಬಹುದು ಎಂದು ಈ ತಂಡ ಸಲಹೆ ಮಾಡಿದೆ.</p>.<p>ವಿಜ್ಞಾನ ಪ್ರತಿಷ್ಠಾನದ ಅಧ್ಯಕ್ಷ ಕೆ. ದಿನೇಶ್, ಟ್ರಸ್ಟಿಗಳಾದ ಎನ್.ಆರ್.ನಾರಾಯಣಮೂರ್ತಿ, ಟಿ.ವಿ. ಮೋಹನ್ ದಾಸ್ ಪೈ, ಎಸ್. ಗೋಪಾಲಕೃಷ್ಣನ್, ಎಸ್.ಡಿ. ಶಿಬುಲಾಲ್, ಶ್ರೀನಾಥ್ ಬಾಟ್ನಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>