ರಾಜರಾಜೇಶ್ವರಿನಗರ: ಯಶವಂತಪುರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಟಿ.ಎನ್.ಜವರಾಯಿಗೌಡ ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ಟಿ.ಎಂ.ನಾರಾಯಣಗೌಡ ಅವರ ನಾಗರಬಾವಿಯಲ್ಲಿರುವ ಮನೆಗೆ ಭೇಟಿ ನೀಡಿ ಜೆಡಿಎಸ್ಗೆ ಬೆಂಬಲ ನೀಡುವಂತೆ ಕೋರಿದರು. ಬಳಿಕ ಪರಿಯಪ್ಪನಪಾಳ್ಯದಲ್ಲಿ ಮತ ಯಾಚಿಸಿ, ‘ಎರಡು ಬಾರಿ ಪರಾಜಿತನಾಗಿದ್ದು, ಈ ಸಲ ಗೆಲ್ಲಿಸುವ ಮೂಲಕ ಜನರ ಸೇವೆಗೆ ಅವಕಾಶ ನೀಡಬೇಕು’ ಎಂದರು.