ತಮ್ಮ ನೇಮಕದ ಕುರಿತು ‘ಪ್ರಜಾವಾಣಿ’ ಜತೆ ಮಾತನಾಡಿದ ಅವರು, ‘ಕೇಂದ್ರ ಸರ್ಕಾರ ಮಹತ್ವದ ಜವಾಬ್ದಾರಿಯನ್ನು ನೀಡಿದೆ. ಆಫ್ರಿಕಾ ಮತ್ತು ಲ್ಯಾಟಿನ್ ಅಮೆರಿಕ ದೇಶಗಳ ಜತೆ ವಾಣಿಜ್ಯ– ವ್ಯವಹಾರ ಮತ್ತು ಹವಾಮಾನ ಬದಲಾವಣೆಯಂತಹ ವಿಷಯಗಳಲ್ಲಿ ಪಾಲುದಾರಿಕೆ ವಹಿಸುತ್ತಿದೆ. ಗಯಾನದ ಜನಸಂಖ್ಯೆಯಲ್ಲಿ ಶೇ 40 ಭಾರತೀಯ ಮೂಲದವರೇ ಇದ್ದಾರೆ. ಇವರ ಜತೆ ಬಾಂಧವ್ಯ ವೃದ್ಧಿ ಮಾಡಿ, ಭಾರತದ ಜತೆ ಮತ್ತೆ ಬೆಸೆಯುವ ಕಾರ್ಯ ಮಾಡಲಾಗುವುದು’ ಎಂದರು.