ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಟ್ರಸ್ಟ್ನ ಸಂಸ್ಥಾಪಕ ಟ್ರಸ್ಟಿ ಡಾ. ವಿಜಯಲಕ್ಷ್ಮಿ ಪರಮೇಶ್, ‘ಕನಕ ವೈದ್ಯ ರತ್ನ ಪ್ರಶಸ್ತಿ’ಗೆ ತುಮಕೂರಿನ ಶ್ರೀದೇವಿ ಸಮೂಹ ಸಂಸ್ಥೆಯ ಸಂಸ್ಥಾಪಕ ಡಾ. ಹುಲಿನಾಯ್ಕ್, ‘ಕನಕ ವೈದ್ಯಶ್ರೀ ಪ್ರಶಸ್ತಿ’ಗೆ ನಾಗಪುರದ ಹೃದಯ ತಜ್ಞ ಡಾ. ಸತೀಶ ಖಡ್ಸೆ ಹಾಗೂ ಮಧುಮೇಹ ತಜ್ಞ ಡಾ. ವಿಕ್ರಮ್ ಆರೇಳ್ಳ,‘ಕನಕ ವೈದ್ಯ ಗುರು ಪ್ರಶಸ್ತಿ’ಗೆ ಮೈಸೂರಿನ ರೋಗವಿಜ್ಞಾನದ ಪ್ರಾಧ್ಯಾಪಕ ಡಾ. ರಂಗಸ್ವಾಮಿ ಹಾಗೂ ‘ಅಹಿಲ್ಯಾ ವೈದ್ಯ ರತ್ನ ಪ್ರಶಸ್ತಿ’ಗೆ ಅನಂತಪುರದ ಸಹ ಪ್ರಾಧ್ಯಾಪಕಿ ಡಾ.ಸಿ. ಭವಾನಿ ಆಯ್ಕೆಯಾಗಿದ್ದಾರೆ’ ಎಂದು ತಿಳಿಸಿದರು.