‘2023ರ ಜುಲೈ 10ರಂದು ಜ್ಞಾನಜ್ಯೋತಿ ಸಭಾಂಗಣದಲ್ಲಿ ನಡೆದ ಘಟಿಕೋತ್ಸವ ಕಾರ್ಯಕ್ರಮ ಸಂಪೂರ್ಣ ಇಂಗ್ಲಿಷ್ ಮಯವಾಗಿತ್ತು. ಕುಲಪತಿ ಪ್ರೊ. ಲಿಂಗರಾಜ ಗಾಂಧಿ ಅವರು ಇಂಗ್ಲಿಷ್ನಲ್ಲಿಯೇ ಸ್ವಾಗತಿಸಿ, ವರದಿಯನ್ನು ಇಂಗ್ಲಿಷ್ನಲ್ಲಿಯೇ ಮಂಡಿಸಿದರು. ಭಿತ್ತಿ ಫಲಕವು ಇಂಗ್ಲಿಷ್ನಲ್ಲಿಯೇ ರಾರಾಜಿಸುತ್ತಿತ್ತು. ಕಾಟಾಚಾರಕ್ಕೆ ಒಂದೆರಡು ಸಾಲನ್ನು ಕನ್ನಡದಲ್ಲಿ ಬರೆಯಲಾಗಿತ್ತು. ಇದು ಸರ್ಕಾರಿ ಆದೇಶದ ಉಲ್ಲಂಘನೆಯಾಗಿದೆ’ ಎಂದು ಬಳಗದ ಸಂಚಾಲಕ ರಾ.ನಂ. ಚಂದ್ರಶೇಖರ ಆಕ್ರೋಶ ವ್ಯಕ್ತಪಡಿಸಿದ್ದಾರೆ.