ಅಮೆರಿಕದಲ್ಲಿ ನೆಲೆಸಿರುವ ಸಂಗೀತಗಾರರಾದ ಸುನೀತಾ ಅನಂತಸ್ವಾಮಿ ‘ಕನ್ನಡವೆಂದರೆ ಬರಿ ನುಡಿಯಲ್ಲ...’ ಹಾಡನ್ನ ಹೇಳುವ ಮೂಲಕ ಕಾರ್ಯಕ್ರಮದ ಮೆರುಗು ಹೆಚ್ಚಿಸಿದರು. ಚಲನಚಿತ್ರ ನಿರ್ದೇಶಕ ಡಾ. ನಾಗತಿಹಳ್ಳಿ ಚಂದ್ರಶೇಖರ್ ಮತ್ತು ನಗೆ ಭಾಷಣಕಾರ ಪ್ರೊ. ಕೃಷ್ಣೇಗೌಡ ಭಾಗವಹಿಸಿದ್ದರು. ನಂದಿ ಕನ್ನಡ ಕೂಟದ ಅಧ್ಯಕ್ಷರಾದ ಮೈಥಿಲಿ ಮೂರ್ತಿ, ಡಾ. ಹಲ್ಲಗೆರೆ ಮೂರ್ತಿ, ರಮಾ ಸುರೇಶ್, ಮತ್ತು ಪ್ರೊ. ಮಹಾದೇವ್ ಭಟ್ ಹಾಜರಿದ್ದರು.