ಮಕ್ಕಳ ಸಾಹಿತ್ಯದ ಮಹತ್ವ ಕುರಿತು ಕಥೆಗಾರರು, ಪ್ರಕಾಶಕರು, ಶಿಕ್ಷಣ ತಜ್ಞರು ಚರ್ಚೆಗಳಲ್ಲಿ ತೊಡಗಿದ್ದರೆ, ವಿದ್ಯಾರ್ಥಿಗಳು ತಮಗಾಗಿ ಆಯೋಜಿಸಿದ್ದ ಕಾರ್ಯಾಗಾರಗಳಲ್ಲಿ ಭಾಗವಹಿಸುತ್ತ, ಕಥೆಗಳನ್ನು ಬರೆಯುವ ಬಗ್ಗೆ ತಿಳಿದುಕೊಂಡರು. ಈ ಬಾರಿಯ ‘ಕಥಾವನ’ದ ಧ್ಯೇಯವೇ ‘ಮಕ್ಕಳ ಬರವಣಿಗೆಯಲ್ಲಿ ಸುಧಾರಣೆ’ ಎಂದಾಗಿತ್ತು.