ವಡ್ಡಗೆರೆ ನಾಗರಾಜಯ್ಯ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ 20 ಕವಿಗಳು ಕವನ ವಾಚನ ಮಾಡಿದರು. ಸಂತವಾಣಿ ಪಿ. ಸುಧಾಕರ್ ಮತ್ತು ಡಾ. ನಾಗೇಶ್ ಕೆ.ಎನ್ ಅವರ ಸುಗಮ ಸಂಗೀತ ಕಲಾವಿದರ ತಂಡದ ಗಾಯಕರು ಶಿವರುದ್ರಪ್ಪ ಅವರ ಹಲವಾರು ಭಾವಗೀತೆಗಳನ್ನು ಹಾಡಿದರು. ಕಲಾವಿದ ಸಿ. ಚಂದ್ರ ಶೇಖರ್, ಸಾಹಿತಿ ಬಿ.ಟಿ. ಲಲಿತಾ ನಾಯಕ್, ರಂಗ ಕಲಾವಿದೆ ಮಾಲತಿ ಸುಧೀರ್, ಮಲ್ಲಿಕಾರ್ಜುನಸ್ವಾಮಿ ಮಹಾಮನೆ, ಸುನೀತಾ ರಾಮಾಚಾರಿ, ತಿಮ್ಮಯ್ಯ, ಫಾಲನೇತ್ರ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.