‘ದೊಡ್ಡಬಸ್ತಿ ರಾಮಸಂದ್ರ ಕೆರೆಯಿಂದ ನೀರು ಬಿಟ್ಟಿದ್ದರಿಂದ ಮೀನುಗಳ ಸಾವು ಸಂಭವಿಸಿದೆ ಎಂಬುದು ಸುಳ್ಳು. ಬಿಡಿಎ ಅಧಿಕಾರಿಗಳ ಗಮನಕ್ಕೆ ತಂದೇ ಈ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಕೊಮ್ಮಘಟ್ಟ ಕೆರೆ ಕಲುಷಿತಗೊಂಡಿದ್ದು, ಕ್ರಮ ಕೈಗೊಳ್ಳುವಂತೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಈ ಮೊದಲೇ ಹೇಳಿತ್ತು. ನೋಟಿಸ್ ಕೂಡ ನೀಡಿತ್ತು. ಅದಕ್ಕೆ ಕ್ರಮ ಕೈಗೊಳ್ಳದೆ ಈಗ ನಮ್ಮ ಮೇಲೆ ಹೇಳುವುದು ಸರಿಯಲ್ಲ’ ಎಂದು ಬಿಬಿಎಂಪಿ ಅಧಿಕಾರಿಗಳು ಹೇಳಿದ್ದಾರೆ.