<p class="Subhead"><strong>ರಾಜರಾಜೇಶ್ವರಿನಗರ (ಬೆಂಗಳೂರು): </strong>ಕೊಮ್ಮಘಟ್ಟ ಕೆರೆಗೆ ಸುತ್ತ–ಮುತ್ತಲ ಗ್ರಾಮಗಳ ಬಡಾವಣೆಯಿಂದ ಮತ್ತು ಕೈಗಾರಿಕೆಗಳಿಂದ ಕಲುಷಿತ ನೀರು, ರಾಸಾಯನಿಕ ಹರಿದ ಪರಿಣಾಮ ಸಾವಿರಾರು ಮೀನುಗಳು ಅಸುನೀಗಿವೆ.</p>.<p>ಒಳಚರಂಡಿ ಹಾಗೂ ದೊಡ್ಡಬಸ್ತಿ ಬಳಿಯ ಸಣ್ಣ ಕೈಗಾರಿಕೆಗಳಿಂದ ಕಲುಷಿತ ನೀರು ನೇರವಾಗಿ ಕೆರೆ ಸೇರುತ್ತಿದೆ ಎಂದು ಗ್ರಾಮಸ್ಥರು ದೂರುತ್ತಾರೆ.</p>.<p>‘ದೊಡ್ಡಬಸ್ತಿಯ ರಾಮಸಂದ್ರ ಕೆರೆಯು ಕಲುಷಿತಗೊಂಡಿದ್ದು ಅದನ್ನು ಶುದ್ಧೀಕರಿಸಿ ಅಭಿವೃದ್ಧಿ ಪಡಿಸುವ ಸಲುವಾಗಿ ಆ ನೀರನ್ನು ಕೊಮ್ಮಘಟ್ಟ ಕೆರೆಗೆ ಹರಿಸಿದ್ದು ಈ ಅವಾಂತರಕ್ಕೆ ಕಾರಣವಾಗಿದೆ’ ಎಂದು ಬಿಡಿಎ ಅಧಿಕಾರಿಗಳು ಹೇಳುತ್ತಾರೆ.</p>.<p>‘ದೊಡ್ಡಬಸ್ತಿ ರಾಮಸಂದ್ರ ಕೆರೆಯಿಂದ ನೀರು ಬಿಟ್ಟಿದ್ದರಿಂದ ಮೀನುಗಳ ಸಾವು ಸಂಭವಿಸಿದೆ ಎಂಬುದು ಸುಳ್ಳು. ಬಿಡಿಎ ಅಧಿಕಾರಿಗಳ ಗಮನಕ್ಕೆ ತಂದೇ ಈ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಕೊಮ್ಮಘಟ್ಟ ಕೆರೆ ಕಲುಷಿತಗೊಂಡಿದ್ದು, ಕ್ರಮ ಕೈಗೊಳ್ಳುವಂತೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಈ ಮೊದಲೇ ಹೇಳಿತ್ತು. ನೋಟಿಸ್ ಕೂಡ ನೀಡಿತ್ತು. ಅದಕ್ಕೆ ಕ್ರಮ ಕೈಗೊಳ್ಳದೆ ಈಗ ನಮ್ಮ ಮೇಲೆ ಹೇಳುವುದು ಸರಿಯಲ್ಲ’ ಎಂದು ಬಿಬಿಎಂಪಿ ಅಧಿಕಾರಿಗಳು ಹೇಳಿದ್ದಾರೆ.</p>.<p>‘ಮೀನುಗಳು ಸತ್ತಿರುವುದರಿಂದ ಕೆರೆಯ ಸುತ್ತ–ಮುತ್ತ ದುರ್ವಾಸನೆ ಬರುತ್ತಿದೆ. ಅಧಿಕಾರಿಗಳು ಆರೋಪ–ಪ್ರತ್ಯಾರೋಪ ಬಿಟ್ಟು ಕೆರೆಯನ್ನು ಸ್ವಚ್ಛಗೊಳಿಸಲು ಆದ್ಯತೆ ನೀಡಬೇಕು’ ಎಂದು ಸಾರ್ವಜನಿಕರು ಒತ್ತಾಯಿಸುತ್ತಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p class="Subhead"><strong>ರಾಜರಾಜೇಶ್ವರಿನಗರ (ಬೆಂಗಳೂರು): </strong>ಕೊಮ್ಮಘಟ್ಟ ಕೆರೆಗೆ ಸುತ್ತ–ಮುತ್ತಲ ಗ್ರಾಮಗಳ ಬಡಾವಣೆಯಿಂದ ಮತ್ತು ಕೈಗಾರಿಕೆಗಳಿಂದ ಕಲುಷಿತ ನೀರು, ರಾಸಾಯನಿಕ ಹರಿದ ಪರಿಣಾಮ ಸಾವಿರಾರು ಮೀನುಗಳು ಅಸುನೀಗಿವೆ.</p>.<p>ಒಳಚರಂಡಿ ಹಾಗೂ ದೊಡ್ಡಬಸ್ತಿ ಬಳಿಯ ಸಣ್ಣ ಕೈಗಾರಿಕೆಗಳಿಂದ ಕಲುಷಿತ ನೀರು ನೇರವಾಗಿ ಕೆರೆ ಸೇರುತ್ತಿದೆ ಎಂದು ಗ್ರಾಮಸ್ಥರು ದೂರುತ್ತಾರೆ.</p>.<p>‘ದೊಡ್ಡಬಸ್ತಿಯ ರಾಮಸಂದ್ರ ಕೆರೆಯು ಕಲುಷಿತಗೊಂಡಿದ್ದು ಅದನ್ನು ಶುದ್ಧೀಕರಿಸಿ ಅಭಿವೃದ್ಧಿ ಪಡಿಸುವ ಸಲುವಾಗಿ ಆ ನೀರನ್ನು ಕೊಮ್ಮಘಟ್ಟ ಕೆರೆಗೆ ಹರಿಸಿದ್ದು ಈ ಅವಾಂತರಕ್ಕೆ ಕಾರಣವಾಗಿದೆ’ ಎಂದು ಬಿಡಿಎ ಅಧಿಕಾರಿಗಳು ಹೇಳುತ್ತಾರೆ.</p>.<p>‘ದೊಡ್ಡಬಸ್ತಿ ರಾಮಸಂದ್ರ ಕೆರೆಯಿಂದ ನೀರು ಬಿಟ್ಟಿದ್ದರಿಂದ ಮೀನುಗಳ ಸಾವು ಸಂಭವಿಸಿದೆ ಎಂಬುದು ಸುಳ್ಳು. ಬಿಡಿಎ ಅಧಿಕಾರಿಗಳ ಗಮನಕ್ಕೆ ತಂದೇ ಈ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಕೊಮ್ಮಘಟ್ಟ ಕೆರೆ ಕಲುಷಿತಗೊಂಡಿದ್ದು, ಕ್ರಮ ಕೈಗೊಳ್ಳುವಂತೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಈ ಮೊದಲೇ ಹೇಳಿತ್ತು. ನೋಟಿಸ್ ಕೂಡ ನೀಡಿತ್ತು. ಅದಕ್ಕೆ ಕ್ರಮ ಕೈಗೊಳ್ಳದೆ ಈಗ ನಮ್ಮ ಮೇಲೆ ಹೇಳುವುದು ಸರಿಯಲ್ಲ’ ಎಂದು ಬಿಬಿಎಂಪಿ ಅಧಿಕಾರಿಗಳು ಹೇಳಿದ್ದಾರೆ.</p>.<p>‘ಮೀನುಗಳು ಸತ್ತಿರುವುದರಿಂದ ಕೆರೆಯ ಸುತ್ತ–ಮುತ್ತ ದುರ್ವಾಸನೆ ಬರುತ್ತಿದೆ. ಅಧಿಕಾರಿಗಳು ಆರೋಪ–ಪ್ರತ್ಯಾರೋಪ ಬಿಟ್ಟು ಕೆರೆಯನ್ನು ಸ್ವಚ್ಛಗೊಳಿಸಲು ಆದ್ಯತೆ ನೀಡಬೇಕು’ ಎಂದು ಸಾರ್ವಜನಿಕರು ಒತ್ತಾಯಿಸುತ್ತಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>