<p><strong>ಬೆಂಗಳೂರು</strong>: ಕನ್ನಡ ಸಾಹಿತ್ಯ ಪರಿಷತ್ ಕೊಡಮಾಡುವ 2024ನೇ ಸಾಲಿನ 'ದಿವಂಗತ ಶ್ರೀಮತಿ ಕೆ.ವಿ. ರತ್ನಮ್ಮ ದತ್ತಿ' ಪ್ರಶಸ್ತಿಗೆ ಹೇಮಂತ್ ಕೆ. ಲಿಂಗಪ್ಪ ಅವರು ಬರೆದಿರುವ 'ಮತ್ತೆ ಮತ್ತೆ ಮಳೆ' ಕವನ ಸಂಕಲನ ಆಯ್ಕೆಯಾಗಿದೆ.</p>.<p>ಸಾಹಿತ್ಯ ಪರಿಷತ್ತಿನ ವಿವಿಧ ದತ್ತಿ ಪ್ರಶಸ್ತಿಗಳಿಗೆ ಕೃತಿಗಳನ್ನು ಆಯ್ಕೆ ಮಾಡಲು ರಚಿಸಲಾದ ಹಿರಿಯ ವಿದ್ವಾಂಸ ಡಾ.ಕೆ.ಮರುಳಸಿದ್ದಪ್ಪ ಅವರ ಅಧ್ಯಕ್ಷತೆಯ ಸಮಿತಿ 'ದಿವಂಗತ ಕೆ.ವಿ. ರತ್ನಮ್ಮ ದತ್ತಿ' ಪ್ರಶಸ್ತಿಗೆ ಹೇಮಂತ್ ಕೆ. ಲಿಂಗಪ್ಪ ಅವರು ಬರೆದಿರುವ ಈ ಕವನ ಸಂಕಲನವನ್ನು ಆಯ್ಕೆ ಮಾಡಿದೆ.</p>.<p>ಹೇಮಂತ್ ಲಿಂಗಪ್ಪ ಅವರು ಬೆಸ್ಕಾಂ ಕಾರ್ಪೊರೇಟ್ ಕಚೇರಿಯಲ್ಲಿ ಸಹಾಯಕ ಅಭಿಯಂತರರಾಗಿ ಕಾರ್ಯ ನಿರ್ವಹಿಸುತ್ತಿದ್ದು, ಕವನಗಳ ರಚನೆ ಅವರ ಪ್ರವೃತ್ತಿಯಾಗಿದೆ.</p>
<p><strong>ಬೆಂಗಳೂರು</strong>: ಕನ್ನಡ ಸಾಹಿತ್ಯ ಪರಿಷತ್ ಕೊಡಮಾಡುವ 2024ನೇ ಸಾಲಿನ 'ದಿವಂಗತ ಶ್ರೀಮತಿ ಕೆ.ವಿ. ರತ್ನಮ್ಮ ದತ್ತಿ' ಪ್ರಶಸ್ತಿಗೆ ಹೇಮಂತ್ ಕೆ. ಲಿಂಗಪ್ಪ ಅವರು ಬರೆದಿರುವ 'ಮತ್ತೆ ಮತ್ತೆ ಮಳೆ' ಕವನ ಸಂಕಲನ ಆಯ್ಕೆಯಾಗಿದೆ.</p>.<p>ಸಾಹಿತ್ಯ ಪರಿಷತ್ತಿನ ವಿವಿಧ ದತ್ತಿ ಪ್ರಶಸ್ತಿಗಳಿಗೆ ಕೃತಿಗಳನ್ನು ಆಯ್ಕೆ ಮಾಡಲು ರಚಿಸಲಾದ ಹಿರಿಯ ವಿದ್ವಾಂಸ ಡಾ.ಕೆ.ಮರುಳಸಿದ್ದಪ್ಪ ಅವರ ಅಧ್ಯಕ್ಷತೆಯ ಸಮಿತಿ 'ದಿವಂಗತ ಕೆ.ವಿ. ರತ್ನಮ್ಮ ದತ್ತಿ' ಪ್ರಶಸ್ತಿಗೆ ಹೇಮಂತ್ ಕೆ. ಲಿಂಗಪ್ಪ ಅವರು ಬರೆದಿರುವ ಈ ಕವನ ಸಂಕಲನವನ್ನು ಆಯ್ಕೆ ಮಾಡಿದೆ.</p>.<p>ಹೇಮಂತ್ ಲಿಂಗಪ್ಪ ಅವರು ಬೆಸ್ಕಾಂ ಕಾರ್ಪೊರೇಟ್ ಕಚೇರಿಯಲ್ಲಿ ಸಹಾಯಕ ಅಭಿಯಂತರರಾಗಿ ಕಾರ್ಯ ನಿರ್ವಹಿಸುತ್ತಿದ್ದು, ಕವನಗಳ ರಚನೆ ಅವರ ಪ್ರವೃತ್ತಿಯಾಗಿದೆ.</p>