‘ರೂಪಾ ಅಶ್ವಥ್, ಶಶಿಚಂದ್ರಶೇಖರಯ್ಯ, ಮಂಜು ಅಶ್ವತ್ಥ, ಛಾಯಾ ಅಶ್ವತ್ಥ ಎಂಬುವರ ಹೆಸರಿನಲ್ಲಿ ಕೃಷಿ ಜಮೀನಿದ್ದು, ಅದನ್ನು ಕೆಂಚಪ್ಪಗೌಡ ಎಂಬ ವ್ಯಕ್ತಿಗೆ ಮಾರಾಟ ಕರಾರು (ಜಿಪಿಎ) ಮಾಡಿಕೊಡಲಾಗಿದೆ. ಈ ಜಾಗದಲ್ಲಿ ಯಾವುದೇ ಪ್ರಾಧಿಕಾರದ ಅನುಮತಿ ಪಡೆಯದೇ ವಸತಿ ಬಡಾವಣೆ ನಿರ್ಮಿಸಿ ನಿವೇಶನ ಮಾರಾಟ ಮಾಡುಲಾಗುತ್ತಿತ್ತು. ಈ ಸಂಬಂಧ ನೀಡಿದ ನೋಟಿಸ್ಗೆ ಉತ್ತರವನ್ನೂ ನೀಡದ ಕಾರಣ ಜಿಲ್ಲಾಧಿಕಾರಿ ವಿ. ಶಿವಮೂರ್ತಿ ಅವರ ನಿರ್ದೇಶನದಂತೆ ತೆರವುಗೊಳಿಸಲಾಯಿತು’ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.