‘ಮದ್ಯದ ಅಮಲಿನಲ್ಲಿ ಮನೆಗೆ ಬಂದು ಗಲಾಟೆ ಮಾಡಿದ್ದ ಆಂಜನೇಯ, ಊಟ ಮಾಡಿ ಮಲಗಿದ್ದ. ಅದೇ ಸಂದರ್ಭದಲ್ಲೇ ರಾಕೇಶ್ನನ್ನು ಅನಿತಾ ಮನೆಗೆ ಕರೆಸಿಕೊಂಡಿದ್ದರು. ಇಬ್ಬರೂ ಸೇರಿ, ಆಂಜನೇಯ ಮುಖವನ್ನು ದಿಂಬಿನಿಂದ ಮುಚ್ಚಿ ಉಸಿರುಗಟ್ಟಿಸಿ ಕೊಂದಿದ್ದರು. ರಾಕೇಶ್ ಅಲ್ಲಿಂದ ಪರಾರಿಯಾಗಿದ್ದ. ಕೃತ್ಯವನ್ನು ಮಗಳು ಸಹ ನೋಡಿದ್ದಳು. ತಂದೆ ಕುಡಿದು ಬಂದು ಗಲಾಟೆ ಮಾಡುತ್ತಿದ್ದರಿಂದ ಕೊಂದಿರುವುದಾಗಿ ಹೇಳಿದ್ದ ಅನಿತಾ, ವಿಷಯವನ್ನು ಯಾರಿಗೂ ಹೇಳಬೇಡವೆಂದು ತಾಕೀತು ಮಾಡಿದ್ದರು.’