ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಹಾಸಭಾದ ರಾಜ್ಯ ಘಟಕದ ಅಧ್ಯಕ್ಷ ಎಲ್.ಕೆ.ಸುವರ್ಣ, ‘ರಾಜ್ಯದಲ್ಲಿ ಛಪಾಕ್ ಸಿನಿಮಾ ಬಿಡುಗಡೆಗೆ ನಮ್ಮ ಸಂಪೂರ್ಣ ವಿರೋಧವಿದೆ. ಆ್ಯಕ್ಸಿಸ್ ಬ್ಯಾಂಕ್ನ ಅಭಿಯಾನವೊಂದಕ್ಕೆ ದೀಪಿಕಾ ರಾಯಭಾರಿಯಾಗಿದ್ದು, ಅದಕ್ಕೆ ಸಂಬಂಧಿಸಿ ಪ್ರದರ್ಶಿಸಿರುವ ಜಾಹೀರಾತುಗಳಲ್ಲಿ ದೀಪಿಕಾ ಭಾವಚಿತ್ರ ಇದೆ. ಕೂಡಲೇ ಅವುಗಳನ್ನು ತೆರವು ಮಾಡದಿದ್ದಲ್ಲಿ, ಮಹಾಸಭಾ ವತಿಯಿಂದಲೇ ತೆರವು ಮಾಡಲಾಗುವುದು’ ಎಂದು ಎಚ್ಚರಿಸಿದರು.