<p><strong>ಬೆಂಗಳೂರು:</strong> ಆಭರಣ ತಯಾರಿಸಿ ಕೊಡುವುದಾಗಿ ಜ್ಯುವೆಲ್ಲರಿ ಮಳಿಗೆ ಮಾಲೀಕನನ್ನು ನಂಬಿಸಿದ ಆಭರಣ ತಯಾರಕ 4.5 ಕೆ.ಜಿ. ಚಿನ್ನ ಸಹಿತಪರಾರಿಯಾಗಿದ್ದಾನೆ.</p>.<p>ಆರ್.ಎಂ.ವಿ. ಲೇಔಟ್ ನಿವಾಸಿ ಸುನೀಲ್ ಕುಮಾರ್ ವಂಚನೆಗೊಳಗಾದವರು. ಸುರೇಶ್ ಆಚಾರಿ ಎಂಬಾತನ ವಿರುದ್ಧ ಉಪ್ಪಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.</p>.<p>ಐದು ವರ್ಷಗಳಿಂದ ಗಾಂಧಿನಗರದ 5ನೇ ಕ್ರಾಸ್ನಲ್ಲಿ ಸುನೀಲ್ ಜ್ಯುವೆಲರಿ ಮಳಿಗೆ ನಡೆಸುತ್ತಿದ್ದಾರೆ. ಅದೇ ಕಟ್ಟಡದ ಕೊಠಡಿಯೊಂದರಲ್ಲಿ ಆಭರಣ ತಯಾರಿಸುವ ಕೆಲಸ ಮಾಡಿಕೊಂಡಿದ್ದ ಸುರೇಶ್, ಸುನೀಲ್ಗೆ ಸಂಬಂಧಿಸಿದ ಆಭರಣಗಳನ್ನು ತಯಾರಿಸಿ ಕೊಡುತ್ತಿದ್ದ.</p>.<p>2018ರಲ್ಲಿ ಅಂಗಡಿ ಮುಚ್ಚಿ ಹೋಗಿದ್ದ ಸುರೇಶ್, ಮತ್ತೆ ಬಂದು ಕೆಲಸ ಮಾಡಿಕೊಡುವುದಾಗಿ ಹೇಳಿದ್ದ. ಇದನ್ನು ನಂಬಿ ಸುನೀಲ್ 10 ಕೆ.ಜಿ. ಚಿನ್ನದ ಬಿಸ್ಕತ್ತು ನೀಡಿದ್ದರು. ಅದರಲ್ಲಿ 5.5 ಕೆ.ಜಿ. ಚಿನ್ನಾಭರಣ ತಯಾರಿಸಿಕೊಟ್ಟಿದ್ದ ಸುರೇಶ್, ಬಳಿಕ ನಾಪತ್ತೆಯಾಗಿದ್ದ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಆಭರಣ ತಯಾರಿಸಿ ಕೊಡುವುದಾಗಿ ಜ್ಯುವೆಲ್ಲರಿ ಮಳಿಗೆ ಮಾಲೀಕನನ್ನು ನಂಬಿಸಿದ ಆಭರಣ ತಯಾರಕ 4.5 ಕೆ.ಜಿ. ಚಿನ್ನ ಸಹಿತಪರಾರಿಯಾಗಿದ್ದಾನೆ.</p>.<p>ಆರ್.ಎಂ.ವಿ. ಲೇಔಟ್ ನಿವಾಸಿ ಸುನೀಲ್ ಕುಮಾರ್ ವಂಚನೆಗೊಳಗಾದವರು. ಸುರೇಶ್ ಆಚಾರಿ ಎಂಬಾತನ ವಿರುದ್ಧ ಉಪ್ಪಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.</p>.<p>ಐದು ವರ್ಷಗಳಿಂದ ಗಾಂಧಿನಗರದ 5ನೇ ಕ್ರಾಸ್ನಲ್ಲಿ ಸುನೀಲ್ ಜ್ಯುವೆಲರಿ ಮಳಿಗೆ ನಡೆಸುತ್ತಿದ್ದಾರೆ. ಅದೇ ಕಟ್ಟಡದ ಕೊಠಡಿಯೊಂದರಲ್ಲಿ ಆಭರಣ ತಯಾರಿಸುವ ಕೆಲಸ ಮಾಡಿಕೊಂಡಿದ್ದ ಸುರೇಶ್, ಸುನೀಲ್ಗೆ ಸಂಬಂಧಿಸಿದ ಆಭರಣಗಳನ್ನು ತಯಾರಿಸಿ ಕೊಡುತ್ತಿದ್ದ.</p>.<p>2018ರಲ್ಲಿ ಅಂಗಡಿ ಮುಚ್ಚಿ ಹೋಗಿದ್ದ ಸುರೇಶ್, ಮತ್ತೆ ಬಂದು ಕೆಲಸ ಮಾಡಿಕೊಡುವುದಾಗಿ ಹೇಳಿದ್ದ. ಇದನ್ನು ನಂಬಿ ಸುನೀಲ್ 10 ಕೆ.ಜಿ. ಚಿನ್ನದ ಬಿಸ್ಕತ್ತು ನೀಡಿದ್ದರು. ಅದರಲ್ಲಿ 5.5 ಕೆ.ಜಿ. ಚಿನ್ನಾಭರಣ ತಯಾರಿಸಿಕೊಟ್ಟಿದ್ದ ಸುರೇಶ್, ಬಳಿಕ ನಾಪತ್ತೆಯಾಗಿದ್ದ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>