<p><strong>ಬೆಂಗಳೂರು:</strong>ನಗರದ ವಿವಿಧೆಡೆ ‘ನಮ್ಮ ಮೆಟ್ರೊ’ ಕಾಮಗಾರಿ ನಡೆಯುತ್ತಿದೆ. ಆದರೆ, ಈ ವೇಳೆ ಬಿಎಂಆರ್ಸಿಎಲ್ ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಂಡಿಲ್ಲ ಎಂದು ನಾಗರಿಕರು ಆರೋಪಿಸಿದ್ದಾರೆ.</p>.<p>ಆರ್.ವಿ. ನಿಲ್ದಾಣದ ಬಳಿ ಗುರುವಾರ ಮಧ್ಯಾಹ್ನ ಬೈಕ್ನಲ್ಲಿ ಹೋಗುತ್ತಿದ್ದಾಗ ಸಚಿನ್ ಎಂಬುವರ ಮೇಲೆ ‘ನಮ್ಮ ಮೆಟ್ರೊ’ ಕಾಮಗಾರಿಗಾಗಿ ನಿಲ್ಲಿಸಿದ್ದ ಬ್ಯಾರಿಕೇಡ್ ಬಿದ್ದಿದೆ. ಅಗತ್ಯ ಸುರಕ್ಷತಾ ಕ್ರಮ ಕೈಗೊಂಡಿದ್ದರೆ ಈ ಅವಘಡ ಸಂಭವಿಸುತ್ತಿರಲಿಲ್ಲ ಎಂದು ಸಚಿನ್ ಹೇಳುತ್ತಾರೆ.</p>.<p>‘ಬನಶಂಕರಿಯಿಂದ 30–35 ಕಿ.ಮೀ. ವೇಗದಲ್ಲಿ ನಾನು ಬೈಕ್ನಲ್ಲಿ ಹೋಗುತ್ತಿದ್ದೆ. ಆರ್.ವಿ. ನಿಲ್ದಾಣದ ಬಳಿ ಬ್ಯಾರಿಕೇಡ್ ನನ್ನ ಮೇಲೆ ಬಿದ್ದಿತು. ಹೆಲ್ಮೆಟ್ ಒಡೆದು ಹೋಯಿತು. ಮುಖ, ಕೈ,ಕಾಲಿಗೆ ಗಾಯವಾಗಿದೆ. ಹೆಲ್ಮೆಟ್ ಹಾಕಿರದಿದ್ದರೆ ಪ್ರಾಣಕ್ಕೇ ಅಪಾಯವಿತ್ತು’ ಎಂದು ಅವರು ತಿಳಿಸಿದರು.</p>.<p>‘ಬ್ಯಾರಿಕೇಡ್ಗಳು ಏಳು–ಎಂಟು ಜನ ಎತ್ತಬೇಕಾದಷ್ಟು ಭಾರವಿರುತ್ತವೆ. ರಸ್ತೆಯ ಬದಿ ಇವುಗಳನ್ನು ಸಾಲಾಗಿ ನಿಲ್ಲಿಸಿದಾಗ ಕಬ್ಬಿಣದ ಸರಳುಗಳನ್ನು ಹಾಕಿ ವೆಲ್ಡ್ ಮಾಡಿರಬೇಕಾಗುತ್ತದೆ. ನಾನು ಸಿವಿಲ್ ಎಂಜಿನಿಯರ್ ಆಗಿರುವುದರಿಂದ ಈ ಬಗ್ಗೆ ಮಾಹಿತಿ ಇದೆ’ ಎಂದರು.</p>.<p>‘ಆರ್.ವಿ. ನಿಲ್ದಾಣದ ಬಳಿ ಸಾಲಾಗಿ ನಿಲ್ಲಿಸಿರುವ ಬ್ಯಾರಿಕೇಡ್ಗಳಿಗೆ ವೆಲ್ಡ್ ಮಾಡಿಲ್ಲ. ಹಿಂದೆ ಸಣ್ಣ ಕಲ್ಲುಗಳನ್ನು ಮಾತ್ರ ಇಟ್ಟಿದ್ದಾರೆ. ಜೋರಾಗಿ ಗಾಳಿ ಬಂದರೆ ಬೀಳುವ ಸ್ಥಿತಿಯಲ್ಲಿ ಇವೆ’ ಎಂದು ಸಚಿನ್ ಹೇಳಿದರು.</p>.<p>ಬ್ಯಾರಿಕೇಡ್ ಬೀಳಲು ಬಿಎಂಆರ್ಸಿಎಲ್ ನಿರ್ಲಕ್ಷ್ಯವೇ ಕಾರಣ ಎಂದು ಜಯನಗರ ಠಾಣೆಯಲ್ಲಿ ದೂರು ನೀಡಿದ್ದೇನೆ ಎಂದು ಅವರು ತಿಳಿಸಿದರು.</p>.<p>ಈ ಕುರಿತು ಪ್ರತಿಕ್ರಿಯೆ ಪಡೆಯಲು ನಿಗಮದ ಅಧಿಕಾರಿಗಳನ್ನು ಸಂಪರ್ಕಿಸಲಾಯಿತು. ಅವರು ಕರೆ ಸ್ವೀಕರಿಸಲಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong>ನಗರದ ವಿವಿಧೆಡೆ ‘ನಮ್ಮ ಮೆಟ್ರೊ’ ಕಾಮಗಾರಿ ನಡೆಯುತ್ತಿದೆ. ಆದರೆ, ಈ ವೇಳೆ ಬಿಎಂಆರ್ಸಿಎಲ್ ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಂಡಿಲ್ಲ ಎಂದು ನಾಗರಿಕರು ಆರೋಪಿಸಿದ್ದಾರೆ.</p>.<p>ಆರ್.ವಿ. ನಿಲ್ದಾಣದ ಬಳಿ ಗುರುವಾರ ಮಧ್ಯಾಹ್ನ ಬೈಕ್ನಲ್ಲಿ ಹೋಗುತ್ತಿದ್ದಾಗ ಸಚಿನ್ ಎಂಬುವರ ಮೇಲೆ ‘ನಮ್ಮ ಮೆಟ್ರೊ’ ಕಾಮಗಾರಿಗಾಗಿ ನಿಲ್ಲಿಸಿದ್ದ ಬ್ಯಾರಿಕೇಡ್ ಬಿದ್ದಿದೆ. ಅಗತ್ಯ ಸುರಕ್ಷತಾ ಕ್ರಮ ಕೈಗೊಂಡಿದ್ದರೆ ಈ ಅವಘಡ ಸಂಭವಿಸುತ್ತಿರಲಿಲ್ಲ ಎಂದು ಸಚಿನ್ ಹೇಳುತ್ತಾರೆ.</p>.<p>‘ಬನಶಂಕರಿಯಿಂದ 30–35 ಕಿ.ಮೀ. ವೇಗದಲ್ಲಿ ನಾನು ಬೈಕ್ನಲ್ಲಿ ಹೋಗುತ್ತಿದ್ದೆ. ಆರ್.ವಿ. ನಿಲ್ದಾಣದ ಬಳಿ ಬ್ಯಾರಿಕೇಡ್ ನನ್ನ ಮೇಲೆ ಬಿದ್ದಿತು. ಹೆಲ್ಮೆಟ್ ಒಡೆದು ಹೋಯಿತು. ಮುಖ, ಕೈ,ಕಾಲಿಗೆ ಗಾಯವಾಗಿದೆ. ಹೆಲ್ಮೆಟ್ ಹಾಕಿರದಿದ್ದರೆ ಪ್ರಾಣಕ್ಕೇ ಅಪಾಯವಿತ್ತು’ ಎಂದು ಅವರು ತಿಳಿಸಿದರು.</p>.<p>‘ಬ್ಯಾರಿಕೇಡ್ಗಳು ಏಳು–ಎಂಟು ಜನ ಎತ್ತಬೇಕಾದಷ್ಟು ಭಾರವಿರುತ್ತವೆ. ರಸ್ತೆಯ ಬದಿ ಇವುಗಳನ್ನು ಸಾಲಾಗಿ ನಿಲ್ಲಿಸಿದಾಗ ಕಬ್ಬಿಣದ ಸರಳುಗಳನ್ನು ಹಾಕಿ ವೆಲ್ಡ್ ಮಾಡಿರಬೇಕಾಗುತ್ತದೆ. ನಾನು ಸಿವಿಲ್ ಎಂಜಿನಿಯರ್ ಆಗಿರುವುದರಿಂದ ಈ ಬಗ್ಗೆ ಮಾಹಿತಿ ಇದೆ’ ಎಂದರು.</p>.<p>‘ಆರ್.ವಿ. ನಿಲ್ದಾಣದ ಬಳಿ ಸಾಲಾಗಿ ನಿಲ್ಲಿಸಿರುವ ಬ್ಯಾರಿಕೇಡ್ಗಳಿಗೆ ವೆಲ್ಡ್ ಮಾಡಿಲ್ಲ. ಹಿಂದೆ ಸಣ್ಣ ಕಲ್ಲುಗಳನ್ನು ಮಾತ್ರ ಇಟ್ಟಿದ್ದಾರೆ. ಜೋರಾಗಿ ಗಾಳಿ ಬಂದರೆ ಬೀಳುವ ಸ್ಥಿತಿಯಲ್ಲಿ ಇವೆ’ ಎಂದು ಸಚಿನ್ ಹೇಳಿದರು.</p>.<p>ಬ್ಯಾರಿಕೇಡ್ ಬೀಳಲು ಬಿಎಂಆರ್ಸಿಎಲ್ ನಿರ್ಲಕ್ಷ್ಯವೇ ಕಾರಣ ಎಂದು ಜಯನಗರ ಠಾಣೆಯಲ್ಲಿ ದೂರು ನೀಡಿದ್ದೇನೆ ಎಂದು ಅವರು ತಿಳಿಸಿದರು.</p>.<p>ಈ ಕುರಿತು ಪ್ರತಿಕ್ರಿಯೆ ಪಡೆಯಲು ನಿಗಮದ ಅಧಿಕಾರಿಗಳನ್ನು ಸಂಪರ್ಕಿಸಲಾಯಿತು. ಅವರು ಕರೆ ಸ್ವೀಕರಿಸಲಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>