<p><strong>ಬೆಂಗಳೂರು:</strong>ನಮ್ಮ ಮೆಟ್ರೊದ ಬೆಳಿಗ್ಗೆಯ ಆರಂಭದ ರೈಲು ನಿಗದಿತ ಸಮಯಕ್ಕೆ ಸಂಚರಿಸದೆ ಇದ್ದುದರಿಂದ ಪ್ರಯಾಣಿಕರಲ್ಲಿ ಗೊಂದಲ ಮೂಡಿಸಿತು. ಕೊನೆಗೆ ಟಿಕೆಟ್ನ ಹಣ ವಾಪಸ್ ಪಡೆದು ಆಟೊ, ಬಸ್ ಹಿಡಿದು ಪ್ರಯಾಣ ಬೆಳೆಸಿದರು.</p>.<p>ಬುಧವಾರ ಬೆಳಿಗ್ಗೆ ಮೈಸೂರು ರಸ್ತೆಯ ಕೊನೆ ನಿಲ್ದಾಣದಿಂದ ಬೈಯಪ್ಪನಹಳ್ಳಿ ಕಡೆಗೆ ಹೊರಡಬೇಕಿದ್ದ ರೈಲು ವಿಜಯನಗರ ನಿಲ್ದಾಣಕ್ಕೆ 5.36ಕ್ಕೆ ಬಂದು ತಲುಪಬೇಕಿತ್ತು. ಆದರೆ, 10ರಿಂದ 12 ನಿಮಿಷ ತಡವಾದರೂ ಬರಲಿಲ್ಲ.</p>.<p>ರೈಲು ತಡವಾಗುತ್ತಿರವ ಬಗ್ಗೆ, ಎಷ್ಟೊತ್ತಿಗೆ ಬರುತ್ತದೆ ಎಂಬ ಬಗ್ಗೆ ಫ್ಲಾಟ್ಫಾರಂನಲ್ಲಿ ಸೂಚನಾ ಫಲಕದಲ್ಲಿಯಾಗಲಿ ಧ್ವನಿ ಮಾಧ್ಯಮದ ಮೂಲಕವಾಗಲಿ ಯಾವುದೇ ಸಂದೇಶವನ್ನು ಬಿತ್ತರಿಸಲಿಲ್ಲ.</p>.<p>ಈ ಬಗ್ಗೆ ಅಲ್ಲಿದ್ದ ಭದ್ರತಾ ಸಿಬ್ಬಂದಿಯನ್ನು ಕೇಳಿದರೆ ಅವರಿಗೂ ಮಾಹಿತಿ ಇರಲಿಲ್ಲ. ಎಲ್ಲಾ ಪ್ರಯಾಣಿಕರು ಕೇಳತೊಡಗಿದ ನಂತರ ಭದ್ರತಾ ಸಿಬ್ಬಂದಿ ಕೌಂಟರ್ಗೆ ಹೋಗಿ ಮಾಹಿತಿ ಪಡೆದು ಬಂದು, ರೈಲು ತಡವಾಗುತ್ತದೆ. ಎಷ್ಟೊತ್ತಿಗೆ ಬರುತ್ತದೆ ಎಂದು ಗೊತ್ತಿಲ್ಲ. ಎಲ್ಲರೂ ವಾಪಸ್ ಹೋಗಿ ಎಂದು ಹೇಳಿದರು.</p>.<p>ಕೌಂಟರ್ಗೆ ಬಂದ ಪ್ರಯಾಣಿಕರು ಅಸಮಾಧಾನ ವ್ಯಕ್ತಪಡಿಸುತ್ತಾ ಟಿಕೆಟ್ ವಾಪಸ್ ಕೊಟ್ಟು ಹಣ ಹಿಂಪಡೆದರು. ರೈಲು ತಡವಾಗುತ್ತಿರುವ ಬಗ್ಗೆ ಯಾವುದೇ ಸೂಚನೆಯನ್ನೂ ನೀಡಲಿಲ್ಲ ಏಕೆ ಎಂದು ಪ್ರಶ್ನಿಸಿದರು.</p>.<p><strong>‘ನಮಗೂ ಗೊತ್ತಿಲ್ಲ’</strong><br />‘ರೈಲು ತಡವಾಗುತ್ತಿರುವ ಬಗ್ಗೆ ನಮಗೂ ಮಾಹಿತಿ ಇಲ್ಲ. ಈಗಷ್ಟೇ ಗೊತ್ತಾಗಿದೆ. ತಾಂತ್ರಿಕ ಸಮಸ್ಯೆ ಎಂದು ತಿಳಿಸಿದ್ದಾರೆ’ ಎಂದು ಕೌಂಟರ್ನಲ್ಲಿದ್ದ ಸಿಬ್ಬಂದಿ ಉತ್ತರಿಸಿದರು.</p>.<p><strong>ಶತಾಬ್ದಿ ರೈಲು ಮಿಸ್ ಆದ್ರೆ ಹಣ ನೀವು ಕೊಡ್ತೀರಾ?</strong><br />‘ನಾವು ಮೆಟ್ರೊ ಹತ್ತಿ, ಸಂಗೊಳ್ಳಿ ರಾಯಣ್ಣ ರೈಲುನಿಲ್ದಾಣದಲ್ಲಿ ಇಳಿದು ಅಲ್ಲಿಂದ ಜನಶತಾಬ್ದಿ ರೈಲಿಗೆ ಹೋಗಬೇಕಿತ್ತು. ಈಗ ಇಲ್ಲಿಯೇ ತಡವಾಗಿದೆ. ನೀವು ಯಾವುದೇ ಸೂಚನೆ ನೀಡದೇ ಇದ್ದುದರಿಂದ ನಮಗೆ ಶತಾಬ್ದಿ ರೈಲು ತಪ್ಪುತ್ತದೆ. ಮುಂಗಡ ಬುಕ್ಕಿಂಗ್ ಮಾಡಿದ್ದ ಟಿಕೆಟ್ನ ಹಣ ನಷ್ಟವಾಗುತ್ತದೆ. ಆ ಹಣವನ್ನು ನೀವು ಕೊಡ್ತೀರಾ?’ ಎಂದು ಶತಾಬ್ದಿ ರೈಲು ಹಿಡಿದು ತೆರಳಬೇಕಿದ್ದ ಪ್ರಯಾಣಿಕರು ಮೆಟ್ರೊ ಸಿಬ್ಬಂದಿಯನ್ನು ಪ್ರಶ್ನಿಸಿದರು. ಬಳಿಕ, ಅವಸರ ಅವಸರವಾಗಿ ಆಟೊ ಹಿಡಿದು ರೈಲುನಿಲ್ದಾಣದತ್ತ ತೆರಳಿದರು.</p>.<p>ಉಳಿಂತೆ ಎಲ್ಲಾ ಪ್ರಯಾಣಿಕರು ಟಿಕೆಟ್ನ ಹಣ ವಾಪಸ್ ಪಡೆದು ಬಸ್, ಆಟೊ, ಬೈಕ್ಗಳಲ್ಲಿ ತೆರಳಿದರು.</p>.<p><strong>ಎಚ್ಚೆತ್ತುಕೊಳ್ಳದ ಸಿಬ್ಬಂದಿ</strong><br />ರೈಲು ತಡವಾಗುತ್ತಿರುವ ಬಗ್ಗೆ 10ರಿಂದ 12 ನಿಮಿಷ ತಡವಾದರೂ ಅಲ್ಲಿದ್ದ ಸಿಬ್ಬಂದಿ ಎಚ್ಚೆತ್ತುಕೊಳ್ಳದೇ ಇದ್ದುದು ವಿಪರ್ಯಾಸವೇ ಸರಿ. ರೈಲು ತಡವಾಗುವ ಕುರಿತು ಮೊದಲೇ ಸೂಚನೆ ನೀಡಿದ್ದರೆ ಪ್ರಯಾಣಿಕರಲ್ಲಿ ಉಂಟಾದ ಗೊಂದಲವನ್ನು ತಪ್ಪಿಸಬಹುದಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong>ನಮ್ಮ ಮೆಟ್ರೊದ ಬೆಳಿಗ್ಗೆಯ ಆರಂಭದ ರೈಲು ನಿಗದಿತ ಸಮಯಕ್ಕೆ ಸಂಚರಿಸದೆ ಇದ್ದುದರಿಂದ ಪ್ರಯಾಣಿಕರಲ್ಲಿ ಗೊಂದಲ ಮೂಡಿಸಿತು. ಕೊನೆಗೆ ಟಿಕೆಟ್ನ ಹಣ ವಾಪಸ್ ಪಡೆದು ಆಟೊ, ಬಸ್ ಹಿಡಿದು ಪ್ರಯಾಣ ಬೆಳೆಸಿದರು.</p>.<p>ಬುಧವಾರ ಬೆಳಿಗ್ಗೆ ಮೈಸೂರು ರಸ್ತೆಯ ಕೊನೆ ನಿಲ್ದಾಣದಿಂದ ಬೈಯಪ್ಪನಹಳ್ಳಿ ಕಡೆಗೆ ಹೊರಡಬೇಕಿದ್ದ ರೈಲು ವಿಜಯನಗರ ನಿಲ್ದಾಣಕ್ಕೆ 5.36ಕ್ಕೆ ಬಂದು ತಲುಪಬೇಕಿತ್ತು. ಆದರೆ, 10ರಿಂದ 12 ನಿಮಿಷ ತಡವಾದರೂ ಬರಲಿಲ್ಲ.</p>.<p>ರೈಲು ತಡವಾಗುತ್ತಿರವ ಬಗ್ಗೆ, ಎಷ್ಟೊತ್ತಿಗೆ ಬರುತ್ತದೆ ಎಂಬ ಬಗ್ಗೆ ಫ್ಲಾಟ್ಫಾರಂನಲ್ಲಿ ಸೂಚನಾ ಫಲಕದಲ್ಲಿಯಾಗಲಿ ಧ್ವನಿ ಮಾಧ್ಯಮದ ಮೂಲಕವಾಗಲಿ ಯಾವುದೇ ಸಂದೇಶವನ್ನು ಬಿತ್ತರಿಸಲಿಲ್ಲ.</p>.<p>ಈ ಬಗ್ಗೆ ಅಲ್ಲಿದ್ದ ಭದ್ರತಾ ಸಿಬ್ಬಂದಿಯನ್ನು ಕೇಳಿದರೆ ಅವರಿಗೂ ಮಾಹಿತಿ ಇರಲಿಲ್ಲ. ಎಲ್ಲಾ ಪ್ರಯಾಣಿಕರು ಕೇಳತೊಡಗಿದ ನಂತರ ಭದ್ರತಾ ಸಿಬ್ಬಂದಿ ಕೌಂಟರ್ಗೆ ಹೋಗಿ ಮಾಹಿತಿ ಪಡೆದು ಬಂದು, ರೈಲು ತಡವಾಗುತ್ತದೆ. ಎಷ್ಟೊತ್ತಿಗೆ ಬರುತ್ತದೆ ಎಂದು ಗೊತ್ತಿಲ್ಲ. ಎಲ್ಲರೂ ವಾಪಸ್ ಹೋಗಿ ಎಂದು ಹೇಳಿದರು.</p>.<p>ಕೌಂಟರ್ಗೆ ಬಂದ ಪ್ರಯಾಣಿಕರು ಅಸಮಾಧಾನ ವ್ಯಕ್ತಪಡಿಸುತ್ತಾ ಟಿಕೆಟ್ ವಾಪಸ್ ಕೊಟ್ಟು ಹಣ ಹಿಂಪಡೆದರು. ರೈಲು ತಡವಾಗುತ್ತಿರುವ ಬಗ್ಗೆ ಯಾವುದೇ ಸೂಚನೆಯನ್ನೂ ನೀಡಲಿಲ್ಲ ಏಕೆ ಎಂದು ಪ್ರಶ್ನಿಸಿದರು.</p>.<p><strong>‘ನಮಗೂ ಗೊತ್ತಿಲ್ಲ’</strong><br />‘ರೈಲು ತಡವಾಗುತ್ತಿರುವ ಬಗ್ಗೆ ನಮಗೂ ಮಾಹಿತಿ ಇಲ್ಲ. ಈಗಷ್ಟೇ ಗೊತ್ತಾಗಿದೆ. ತಾಂತ್ರಿಕ ಸಮಸ್ಯೆ ಎಂದು ತಿಳಿಸಿದ್ದಾರೆ’ ಎಂದು ಕೌಂಟರ್ನಲ್ಲಿದ್ದ ಸಿಬ್ಬಂದಿ ಉತ್ತರಿಸಿದರು.</p>.<p><strong>ಶತಾಬ್ದಿ ರೈಲು ಮಿಸ್ ಆದ್ರೆ ಹಣ ನೀವು ಕೊಡ್ತೀರಾ?</strong><br />‘ನಾವು ಮೆಟ್ರೊ ಹತ್ತಿ, ಸಂಗೊಳ್ಳಿ ರಾಯಣ್ಣ ರೈಲುನಿಲ್ದಾಣದಲ್ಲಿ ಇಳಿದು ಅಲ್ಲಿಂದ ಜನಶತಾಬ್ದಿ ರೈಲಿಗೆ ಹೋಗಬೇಕಿತ್ತು. ಈಗ ಇಲ್ಲಿಯೇ ತಡವಾಗಿದೆ. ನೀವು ಯಾವುದೇ ಸೂಚನೆ ನೀಡದೇ ಇದ್ದುದರಿಂದ ನಮಗೆ ಶತಾಬ್ದಿ ರೈಲು ತಪ್ಪುತ್ತದೆ. ಮುಂಗಡ ಬುಕ್ಕಿಂಗ್ ಮಾಡಿದ್ದ ಟಿಕೆಟ್ನ ಹಣ ನಷ್ಟವಾಗುತ್ತದೆ. ಆ ಹಣವನ್ನು ನೀವು ಕೊಡ್ತೀರಾ?’ ಎಂದು ಶತಾಬ್ದಿ ರೈಲು ಹಿಡಿದು ತೆರಳಬೇಕಿದ್ದ ಪ್ರಯಾಣಿಕರು ಮೆಟ್ರೊ ಸಿಬ್ಬಂದಿಯನ್ನು ಪ್ರಶ್ನಿಸಿದರು. ಬಳಿಕ, ಅವಸರ ಅವಸರವಾಗಿ ಆಟೊ ಹಿಡಿದು ರೈಲುನಿಲ್ದಾಣದತ್ತ ತೆರಳಿದರು.</p>.<p>ಉಳಿಂತೆ ಎಲ್ಲಾ ಪ್ರಯಾಣಿಕರು ಟಿಕೆಟ್ನ ಹಣ ವಾಪಸ್ ಪಡೆದು ಬಸ್, ಆಟೊ, ಬೈಕ್ಗಳಲ್ಲಿ ತೆರಳಿದರು.</p>.<p><strong>ಎಚ್ಚೆತ್ತುಕೊಳ್ಳದ ಸಿಬ್ಬಂದಿ</strong><br />ರೈಲು ತಡವಾಗುತ್ತಿರುವ ಬಗ್ಗೆ 10ರಿಂದ 12 ನಿಮಿಷ ತಡವಾದರೂ ಅಲ್ಲಿದ್ದ ಸಿಬ್ಬಂದಿ ಎಚ್ಚೆತ್ತುಕೊಳ್ಳದೇ ಇದ್ದುದು ವಿಪರ್ಯಾಸವೇ ಸರಿ. ರೈಲು ತಡವಾಗುವ ಕುರಿತು ಮೊದಲೇ ಸೂಚನೆ ನೀಡಿದ್ದರೆ ಪ್ರಯಾಣಿಕರಲ್ಲಿ ಉಂಟಾದ ಗೊಂದಲವನ್ನು ತಪ್ಪಿಸಬಹುದಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>