17ರಂದು ನಡೆಯುವ ಕಾರ್ಯಕ್ರಮವನ್ನು ಮೈಸೂರು ರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಉದ್ಘಾಟಿಸುವರು, ಮೈಕೊ ಕನ್ನಡ ಬಳಗದ ಗೌರವಾಧ್ಯಕ್ಷೆ ಡಾ.ಪದ್ಮಿನಿ ನಾಗರಾಜು ಅಧ್ಯಕ್ಷತೆ ವಹಿಸುವರು. ವಾಣಿಜ್ಯ ಅಧಿಕಾರಿ ಎಚ್.ಜಿ.ತೋಂಟೇಶ್ ಧ್ವಜಾರೋಹಣ ನೆರವೇರಿಸುವರು. ಬಾಷ್ ಕಂಪನಿ ಪ್ರಧಾನ ವ್ಯವಸ್ಥಾಪಕ ಎಂ.ಗೋಪಾಲಕರಷ್ಣ ಜೋಷಿ, ನೌಕರರ ಸಂಘದ ಸಂಸ್ಥಾಪಕ ಉಪಧ್ಯಕ್ಷ ಬಿ.ಆರ್.ಸೋಮಶೇಖರ ರೆಡ್ಡಿ ಪ್ರಶಸ್ತಿ ಪ್ರದಾನ ಮಾಡುವರು.