ಗೈರು ಹಾಜರಾಗಿದ್ದ ಸಚಿವರಾದ ಡಿ.ಕೆ.ಶಿವಕುಮಾರ್, ಎಚ್.ಡಿ. ರೇವಣ್ಣ, ರಮೇಶ ಜಾರಕಿಹೊಳಿ, ಯು.ಟಿ. ಖಾದರ್, ಸಿ.ಎಸ್.ಪುಟ್ಟರಾಜು, ಸಾ.ರಾ. ಮಹೇಶ್ ಹಾಗೂ ಜಮೀರ್ ಅಹ್ಮದ್ ಖಾನ್ ಅವರನ್ನು 15 ನಿಮಿಷಗಳಲ್ಲಿ ಸದನಕ್ಕೆ ಕರೆಸಬೇಕು ಎಂದು ಉಪಮುಖ್ಯಮಂತ್ರಿಯವರಿಗೆ ಸೂಚನೆ ನೀಡಿದರು. ಕೆಲವೇ ನಿಮಿಷಗಳಲ್ಲಿ ಒಬ್ಬೊಬ್ಬರೇ ಸಚಿವರು ಕೈಯಲ್ಲಿ ಕಡತ ಹಿಡಿದುಕೊಂಡು ಸದನಕ್ಕೆ ಧಾವಿಸಿ ಬಂದರು. ಮತ್ತೊಮ್ಮೆ ಪಟ್ಟಿ ನೋಡಿದ ಸಭಾಧ್ಯಕ್ಷರು, ಎಲ್ಲರೂ ಬಂದಿರುವುದನ್ನು ಖಚಿತಪಡಿಸಿಕೊಂಡರು.