ದಿನವೂ ಜಗಳ ಮಾಡುತ್ತಿದ್ದ ಪತಿಯ ಹತ್ಯೆಗೆ ಸಂಚು ರೂಪಿಸಿದ್ದ ಅನಿತಾ, ರೋಷನ್ ಹಾಗೂ ಸೋಮರಾಜುಗೆ ವಿಷಯ ತಿಳಿಸಿದ್ದಳು. ಅವರಿಬ್ಬರು ಮಾರಕಾಸ್ತ್ರ ಸಮೇತ ಮನೆಗೆ ಬಂದು ಹತ್ಯೆ ಮಾಡಿ ಹೋಗಿದ್ದರು. ರಕ್ತಸಿಕ್ತ ದೇಹವನ್ನು ಪ್ಲಾಸ್ಟಿಕ್ ಟಾರ್ಪಲ್ನಲ್ಲಿ ಸುತ್ತಿ ಬೆಡ್ ಕೆಳಗೆ ಇಟ್ಟಿದ್ದರು. ಯಾರೋ ದುಷ್ಕರ್ಮಿಗಳು ಮನೆಗೆ ಬಂದು ಹತ್ಯೆ ಮಾಡಿದ್ದಾರೆ ಎಂದು ಪತ್ನಿಯು ನಾಟಕವಾಡಿದ್ದಳು. ನರಸಿಂಹಮೂರ್ತಿ ಅವರ ತಾಯಿ ನೀಡಿದ್ದ ದೂರಿನನ್ವಯ ತನಿಖೆ ನಡೆಸಿ ಆರೋಪಿಗಳನ್ನು ಪತ್ತೆ ಹಚ್ಚಿದ್ದೇವೆ ಎಂದು ಪೊಲೀಸರು ತಿಳಿಸಿದರು.