‘ಮೂರು ಮಂದಿ ಹಣ ತುಂಬಿಸುವವರ (ಕಸ್ಟೋಡಿಯನ್ಗಳು) ಜೊತೆ ಶುಕ್ರವಾರ ಸಂಜೆ ಕಮ್ಮನಹಳ್ಳಿಯಲ್ಲಿರುವ ಐಸಿಐಸಿಐ ಬ್ಯಾಂಕಿನ ಎಟಿಎಂ ಘಟಕಕ್ಕೆ ಹಣ ತುಂಬಲು ವಾಹನ ಚಲಾಯಿಸಿಕೊಂಡು ಪವನ್ ಹೋಗಿದ್ದ. ಸಿಬ್ಬಂದಿ ಹಣ ತುಂಬಲು ತೆರಳಿದ ವೇಳೆ ವಾಹನ ಸಹಿತ ಪವನ್ ಪರಾರಿಯಾಗಿದ್ದಾನೆ. ಇಬ್ಬರು ಗನ್ಮನ್ಗಳು ಅವನನ್ನು ಹಿಂಬಾಲಿಸಿದರೂ ಪ್ರಯೋಜನವಾಗಲಿಲ್ಲ. ಲಿಂಗಾರಾಜಪುರ ಫ್ಲೈಓವರ್ ಮೇಲೆ ವಾಹನ ಬಿಟ್ಟು ಪವನ್ ತಲೆಮರೆಸಿಕೊಂಡಿದ್ದಾನೆ’ ಎಂದೂ ಪೊಲೀಸರು ಹೇಳಿದರು.