‘ವೆಂಕಟೇಶ್ ಅವರು ಊಟಕ್ಕೆಂದು ಬುಧವಾರ ರಾತ್ರಿ ಇಟ್ಟಮಡುವಿನಲ್ಲಿರುವ ಸಂಬಂಧಿಕರ ಹೋಟೆಲ್ಗೆ ಹೋಗಿದ್ದರು. ಅದೇ ಹೋಟೆಲ್ಗೆ ಬಂದಿದ್ದ ಆರೋಪಿಗಳಾದ ರಾಘವೇಂದ್ರ, ದರ್ಶನ್ ಹಾಗೂ ರುದ್ರೇಶ್ ಪರಸ್ಪರ ಜಗಳ ಮಾಡಲಾರಂಭಿಸಿದ್ದರು. ಮಧ್ಯ ಪ್ರವೇಶಿಸಿದ್ದ ವೆಂಕಟೇಶ್, ಜಗಳ ಬಿಡಿಸಲು ಯತ್ನಿಸಿದ್ದರು. ಆಗ, ಆರೋಪಿ ದರ್ಶನ್ ಹಾಗೂ ವೆಂಕಟೇಶ್ ನಡುವೆ ಮಾತಿನ ಚಕಮಕಿ ನಡೆದಿತ್ತು’ ಎಂದು ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸರು ಹೇಳಿದರು.