ಬಿಸಿಎ ಪದವಿ ಪಡೆದಿರುವ ಪ್ರಣವ್, ರಿಯಲ್ ಎಸ್ಟೇಟ್ ಸಂಸ್ಥೆಯೊಂದರ ಕಚೇರಿಗೆ ಕೆಲಸ ಹೋಗುತ್ತಿದ್ದ. ಆದರೆ, ಒಂದು ತಿಂಗಳಿಂದ ಕೆಲಸಕ್ಕೆ ಹೋಗದೆ ಮನೆಯಲ್ಲೇ ಇರುತ್ತಿದ್ದ. ಮಂಗಳವಾರ ಸಂಜೆ ಏಳು ಗಂಟೆ ಸುಮಾರಿಗೆ ಮನೆಯಿಂದ ಹೊರಹೋದ ಪ್ರಣವ್, ರಾಜಾಜಿನಗರದ ಉದ್ಯಾನದ ಕಡೆ ತೆರಳಿದ್ದಾರೆ. ಈ ವೇಳೆ ಅಲ್ಲಿಗೆ ಕೆಲವು ಸ್ನೇಹಿತರು ಬಂದಿದ್ದಾರೆ. ಪ್ರಣವ್ ಮತ್ತು ಆತನ ಸ್ನೇಹಿತರು ವೈಯಕ್ತಿಕ ವಿಚಾರಕ್ಕೆ ಪರಸ್ಪರ ವಾಗ್ವಾದ ಮಾಡಿದ್ದು, ಹೊಡೆದಾಟವೂ ನಡೆದಿದೆ. ಪ್ರಣವ್ರನ್ನು ಪಾರ್ಕ್ನಲ್ಲಿದ್ದ ಕಟ್ಟೆಯ ಮೇಲೆ ದೂಡಿದ ದುಷ್ಕರ್ಮಿಗಳು, ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ.