<p><strong>ರಾಜರಾಜೇಶ್ವರಿನಗರ:</strong> ಆರ್.ಆರ್.ನಗರ ವಿಧಾನಸಭಾಕ್ಷೇತ್ರದ ಮತ್ತಿಕೆರೆ ಮಸೀದಿಯ ಮುಂಭಾಗದಲ್ಲಿ ಶುಕ್ರವಾರ ನೂರಾರು ಮುಸ್ಲಿಮರು ಮಳೆಗಾಗಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.</p>.<p>ಮಸ್ಜಿದ್-ಎ-ತಾಹಾ ಅಧ್ಯಕ್ಷ ಸಮೀಉಲ್ಲಾಖಾನ್ ನೇತೃತ್ವದಲ್ಲಿ ನಡೆದ ಪ್ರಾರ್ಥನೆಯಲ್ಲಿ, ನೂರಾರು ಮಂದಿ ಪಾಲ್ಗೊಂಡಿದ್ದರು.</p>.<p>ಈ ಸಂದರ್ಭದಲ್ಲಿ ಮಾತನಾಡಿದ ಧರ್ಮಗುರು ಮೌಲಾನಾ ಹುಮಾಯನ್ ರಷಾಧಿ, ‘ಶೀಘ್ರ ಮಳೆ ಬರಲಿ, ಇಳೆ ತಂಪಾಗಲಿ’ ಎಂದು ಪ್ರಾರ್ಥಿಸಿದರು.</p>.<p>ಮಸೀದ್-ಎ-ತಾಹಾ ಅಧ್ಯಕ್ಷ ಸಮೀಉಲ್ಲಾಖಾನ್, ‘ನದಿ, ಕೆರೆಕುಂಟೆ, ಮರ-ಗಿಡ, ಕಾಡು, ಬೆಟ್ಟ ಗುಡ್ಡಗಳನ್ನು ಉಳಿಸುವ ಕೆಲಸವಾಗಬೇಕು. ಮಾನವೀಯತೆಯಿಂದ ಇಂತಹ ಕಾರ್ಯಗಳಲ್ಲಿ ಎಲ್ಲರೂ ಭಾಗಿಯಾಗಬೇಕಾಗಿದೆ‘ ಎಂದರು.</p>.<p>ಕರ್ನಾಟಕ ಹಜ್ ಮಂಡಳಿಯ ಸದಸ್ಯ ಜುಲ್ಫಿಕರ್ ಆಹ್ಮದ್ಖಾನ್ (ಟಿಪ್ಪು), ಮಸೀದ್-ಎ-ತಾಹಾ ಪದಾಧಿಕಾರಿಗಳಾದ ಅಕ್ರಂ, ಬಾಬು, ದಸ್ತಗೀರ್ ಸಲಿಂ, ಬೈತಾನ್ ಮಾಲ್ ಅಧ್ಯಕ್ಷ ನಜೀರ್, ಕಾರ್ಯದರ್ಶಿ ಚಾಂದ್, ಉಪಾಧ್ಯಕ್ಷ ಅಮೀರ್, ಕೋಶಾಧ್ಯಕ್ಷ ನಾಗಮಂಗಲ ಫೈಯಾಸ್, ಮಹಮದ್ ಫಕೃದ್ದೀನ್ ಸೇರಿ ನೂರಾರು ಮುಸ್ಲಿಮರು ಪ್ರಾರ್ಥನೆ ಸಲ್ಲಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಜರಾಜೇಶ್ವರಿನಗರ:</strong> ಆರ್.ಆರ್.ನಗರ ವಿಧಾನಸಭಾಕ್ಷೇತ್ರದ ಮತ್ತಿಕೆರೆ ಮಸೀದಿಯ ಮುಂಭಾಗದಲ್ಲಿ ಶುಕ್ರವಾರ ನೂರಾರು ಮುಸ್ಲಿಮರು ಮಳೆಗಾಗಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.</p>.<p>ಮಸ್ಜಿದ್-ಎ-ತಾಹಾ ಅಧ್ಯಕ್ಷ ಸಮೀಉಲ್ಲಾಖಾನ್ ನೇತೃತ್ವದಲ್ಲಿ ನಡೆದ ಪ್ರಾರ್ಥನೆಯಲ್ಲಿ, ನೂರಾರು ಮಂದಿ ಪಾಲ್ಗೊಂಡಿದ್ದರು.</p>.<p>ಈ ಸಂದರ್ಭದಲ್ಲಿ ಮಾತನಾಡಿದ ಧರ್ಮಗುರು ಮೌಲಾನಾ ಹುಮಾಯನ್ ರಷಾಧಿ, ‘ಶೀಘ್ರ ಮಳೆ ಬರಲಿ, ಇಳೆ ತಂಪಾಗಲಿ’ ಎಂದು ಪ್ರಾರ್ಥಿಸಿದರು.</p>.<p>ಮಸೀದ್-ಎ-ತಾಹಾ ಅಧ್ಯಕ್ಷ ಸಮೀಉಲ್ಲಾಖಾನ್, ‘ನದಿ, ಕೆರೆಕುಂಟೆ, ಮರ-ಗಿಡ, ಕಾಡು, ಬೆಟ್ಟ ಗುಡ್ಡಗಳನ್ನು ಉಳಿಸುವ ಕೆಲಸವಾಗಬೇಕು. ಮಾನವೀಯತೆಯಿಂದ ಇಂತಹ ಕಾರ್ಯಗಳಲ್ಲಿ ಎಲ್ಲರೂ ಭಾಗಿಯಾಗಬೇಕಾಗಿದೆ‘ ಎಂದರು.</p>.<p>ಕರ್ನಾಟಕ ಹಜ್ ಮಂಡಳಿಯ ಸದಸ್ಯ ಜುಲ್ಫಿಕರ್ ಆಹ್ಮದ್ಖಾನ್ (ಟಿಪ್ಪು), ಮಸೀದ್-ಎ-ತಾಹಾ ಪದಾಧಿಕಾರಿಗಳಾದ ಅಕ್ರಂ, ಬಾಬು, ದಸ್ತಗೀರ್ ಸಲಿಂ, ಬೈತಾನ್ ಮಾಲ್ ಅಧ್ಯಕ್ಷ ನಜೀರ್, ಕಾರ್ಯದರ್ಶಿ ಚಾಂದ್, ಉಪಾಧ್ಯಕ್ಷ ಅಮೀರ್, ಕೋಶಾಧ್ಯಕ್ಷ ನಾಗಮಂಗಲ ಫೈಯಾಸ್, ಮಹಮದ್ ಫಕೃದ್ದೀನ್ ಸೇರಿ ನೂರಾರು ಮುಸ್ಲಿಮರು ಪ್ರಾರ್ಥನೆ ಸಲ್ಲಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>