<p><strong>ಬೆಂಗಳೂರು</strong>: ನೂತನ ರಾಷ್ಟ್ರೀಯ ನೀತಿಯ (ಎನ್ಇಪಿ) ಕುರಿತು ಹೆಚ್ಚು ಮಾಹಿತಿ ಒದಗಿಸುವ ಮತ್ತು ಅರಿವು ಮೂಡಿಸುವ ಉದ್ದೇಶದಿಂದ ವಿದ್ಯಾಭಾರತಿ ಸರ್ಕಾರೇತರ ಸಂಸ್ಥೆಯು ‘ನನ್ನ ಎನ್ಇಪಿ’ ಕುರಿತು ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿದೆ.</p>.<p>ಕನ್ನಡವೂ ಸೇರಿದಂತೆ 13 ಭಾಷೆಗಳಲ್ಲಿ ದೇಶದಾದ್ಯಂತ ಈ ಸ್ಪರ್ಧೆ ನಡೆಯಲಿದೆ. ‘ಭಾರತ ಕೇಂದ್ರಿತ ಶಿಕ್ಷಣ’, ‘ಸಮಗ್ರ ಶಿಕ್ಷಣ’, ‘ಜ್ಞಾನಾಧಾರಿತ ಸಮಾಜ’, ‘ಗುಣಮಟ್ಟದ ಶಿಕ್ಷಣ’ ಈ ವಿಷಯಗಳ ಆಧಾರದ ಮೇಲೆ ಸ್ಪರ್ಧೆಗಳು ನಡೆಯಲಿವೆ.</p>.<p>9ರಿಂದ 12ನೆಯ ತರಗತಿಯ ವಿದ್ಯಾರ್ಥಿಗಳಿಗೆ ಭಾಷಣ, ಪ್ರಬಂಧ, ಪ್ರಧಾನಿಗೆ ಪತ್ರ, ಚಿತ್ರಕಲೆ, ಮೀಮ್ಗಳ ರಚನೆ ಕುರಿತು ಸ್ಪರ್ಧೆ ನಡೆಯಲಿದೆ. ಪದವಿಪೂರ್ವ ಮತ್ತು ಮೇಲ್ಪಟ್ಟ ವಿದ್ಯಾರ್ಥಿಗಳಿಗೆ ಕಿರುಚಿತ್ರ ನಿರ್ಮಾಣ, ಡಿಜಿಟಲ್ ಪೋಸ್ಟರ್ ರಚನೆ, ಮೀಮ್ ರಚನೆ ಸ್ಪರ್ಧೆ ಇರಲಿದೆ.</p>.<p>ಸಾರ್ವಜನಿಕರಿಗೆ ಕಿರುಚಿತ್ರ ನಿರ್ಮಾಣ, ಟ್ವೀಟ್ ಥ್ರೆಡ್ ರಚನೆ, ಚಿತ್ರಕಲೆ, ಮೀಮ್ ರಚನೆ ಕುರಿತು ಸ್ಪರ್ಧೆ ನಡೆಯಲಿದೆ. ಪ್ರತಿ ವಿಭಾಗದ, ಪ್ರತಿ ಭಾಷೆಯಲ್ಲಿ ಮೊದಲ ಮೂರು ಸ್ಥಾನ ಪಡೆದವರಿಗೆ ಕ್ರಮವಾಗಿ ತಲಾ ₹10 ಸಾವಿರ, ₹5 ಸಾವಿರ ಮತ್ತು ₹3 ಸಾವಿರ ನಗದು ಬಹುಮಾನ ಇದೆ. ಅಲ್ಲದೆ, ಪ್ರತಿ ವಿಭಾಗದಲ್ಲಿ ಭಾಗವಹಿಸಿದ ಸಾವಿರ ಜನರಿಗೆ ‘ಭಾಗವಹಿಸುವಿಕೆ ಪ್ರಮಾಣ ಪತ್ರ’ ನೀಡಲಾಗುತ್ತದೆ.</p>.<p>ದೀನದಯಾಳ್ ಉಪಾಧ್ಯಾಯ ಅವರ ಜನ್ಮದಿನವಾದ ಸೆ.25ರಂದು ಸ್ಪರ್ಧೆಗಳು ಪ್ರಾರಂಭವಾಗಲಿದ್ದು, ಮಹಾತ್ಮ ಗಾಂಧಿ ಜಯಂತಿಯವರೆಗೆ ಅಂದರೆ, ಅ.2ರವರೆಗೆ ನಡೆಯಲಿವೆ. ಅ.5ರಂದು ವಿಜೇತರ ಪಟ್ಟಿ ಘೋಷಿಸಲಾಗುವುದು ಎಂದು ವಿದ್ಯಾಭಾರತಿ ಸಂಸ್ಥೆ ತಿಳಿಸಿದೆ.</p>.<p>ಮಾಹಿತಿಗೆ, <a href="http://www.mynep.in" target="_blank">www.mynep.in</a> ವೆಬ್ಸೈಟ್ ಸಂಪರ್ಕಿಸಬಹುದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ನೂತನ ರಾಷ್ಟ್ರೀಯ ನೀತಿಯ (ಎನ್ಇಪಿ) ಕುರಿತು ಹೆಚ್ಚು ಮಾಹಿತಿ ಒದಗಿಸುವ ಮತ್ತು ಅರಿವು ಮೂಡಿಸುವ ಉದ್ದೇಶದಿಂದ ವಿದ್ಯಾಭಾರತಿ ಸರ್ಕಾರೇತರ ಸಂಸ್ಥೆಯು ‘ನನ್ನ ಎನ್ಇಪಿ’ ಕುರಿತು ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿದೆ.</p>.<p>ಕನ್ನಡವೂ ಸೇರಿದಂತೆ 13 ಭಾಷೆಗಳಲ್ಲಿ ದೇಶದಾದ್ಯಂತ ಈ ಸ್ಪರ್ಧೆ ನಡೆಯಲಿದೆ. ‘ಭಾರತ ಕೇಂದ್ರಿತ ಶಿಕ್ಷಣ’, ‘ಸಮಗ್ರ ಶಿಕ್ಷಣ’, ‘ಜ್ಞಾನಾಧಾರಿತ ಸಮಾಜ’, ‘ಗುಣಮಟ್ಟದ ಶಿಕ್ಷಣ’ ಈ ವಿಷಯಗಳ ಆಧಾರದ ಮೇಲೆ ಸ್ಪರ್ಧೆಗಳು ನಡೆಯಲಿವೆ.</p>.<p>9ರಿಂದ 12ನೆಯ ತರಗತಿಯ ವಿದ್ಯಾರ್ಥಿಗಳಿಗೆ ಭಾಷಣ, ಪ್ರಬಂಧ, ಪ್ರಧಾನಿಗೆ ಪತ್ರ, ಚಿತ್ರಕಲೆ, ಮೀಮ್ಗಳ ರಚನೆ ಕುರಿತು ಸ್ಪರ್ಧೆ ನಡೆಯಲಿದೆ. ಪದವಿಪೂರ್ವ ಮತ್ತು ಮೇಲ್ಪಟ್ಟ ವಿದ್ಯಾರ್ಥಿಗಳಿಗೆ ಕಿರುಚಿತ್ರ ನಿರ್ಮಾಣ, ಡಿಜಿಟಲ್ ಪೋಸ್ಟರ್ ರಚನೆ, ಮೀಮ್ ರಚನೆ ಸ್ಪರ್ಧೆ ಇರಲಿದೆ.</p>.<p>ಸಾರ್ವಜನಿಕರಿಗೆ ಕಿರುಚಿತ್ರ ನಿರ್ಮಾಣ, ಟ್ವೀಟ್ ಥ್ರೆಡ್ ರಚನೆ, ಚಿತ್ರಕಲೆ, ಮೀಮ್ ರಚನೆ ಕುರಿತು ಸ್ಪರ್ಧೆ ನಡೆಯಲಿದೆ. ಪ್ರತಿ ವಿಭಾಗದ, ಪ್ರತಿ ಭಾಷೆಯಲ್ಲಿ ಮೊದಲ ಮೂರು ಸ್ಥಾನ ಪಡೆದವರಿಗೆ ಕ್ರಮವಾಗಿ ತಲಾ ₹10 ಸಾವಿರ, ₹5 ಸಾವಿರ ಮತ್ತು ₹3 ಸಾವಿರ ನಗದು ಬಹುಮಾನ ಇದೆ. ಅಲ್ಲದೆ, ಪ್ರತಿ ವಿಭಾಗದಲ್ಲಿ ಭಾಗವಹಿಸಿದ ಸಾವಿರ ಜನರಿಗೆ ‘ಭಾಗವಹಿಸುವಿಕೆ ಪ್ರಮಾಣ ಪತ್ರ’ ನೀಡಲಾಗುತ್ತದೆ.</p>.<p>ದೀನದಯಾಳ್ ಉಪಾಧ್ಯಾಯ ಅವರ ಜನ್ಮದಿನವಾದ ಸೆ.25ರಂದು ಸ್ಪರ್ಧೆಗಳು ಪ್ರಾರಂಭವಾಗಲಿದ್ದು, ಮಹಾತ್ಮ ಗಾಂಧಿ ಜಯಂತಿಯವರೆಗೆ ಅಂದರೆ, ಅ.2ರವರೆಗೆ ನಡೆಯಲಿವೆ. ಅ.5ರಂದು ವಿಜೇತರ ಪಟ್ಟಿ ಘೋಷಿಸಲಾಗುವುದು ಎಂದು ವಿದ್ಯಾಭಾರತಿ ಸಂಸ್ಥೆ ತಿಳಿಸಿದೆ.</p>.<p>ಮಾಹಿತಿಗೆ, <a href="http://www.mynep.in" target="_blank">www.mynep.in</a> ವೆಬ್ಸೈಟ್ ಸಂಪರ್ಕಿಸಬಹುದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>